Site icon Vistara News

ಬಳ್ಳಾರಿಯಲ್ಲಿ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ದಾರುಣ ಸಾವು

ಬಳ್ಳಾರಿ

ಬಳ್ಳಾರಿ: ತಾಲೂಕಿನ ತೆಗ್ಗಿನ ಬೂದಿಹಾಳ್ ಗ್ರಾಮದಲ್ಲಿ ಬಹಿರ್ದೆಸೆಗೆ ಹೋಗಿದ್ದ ಇಬ್ಬರು ಮಹಿಳೆಯರು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ತೆಗ್ಗಿನ ಬೂದಿಹಾಳ್ ಗ್ರಾಮದ ಪ್ರಭಾವತಿ (16) ಮತ್ತು ಸ್ವಾತಿ (21) ಮೃತರು.

ಭಾನುವಾರ ಸಂಜೆ ಬಹಿರ್ದೆಸೆಗೆ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ರೈಲಿಗೆ ಸಿಲುಕಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಸ್ವಾತಿ‌ ಎಂಬುವವರಿಗೆ ಮದುವೆಯಾಗಿದ್ದು, ಇಬ್ಬರೂ ಅಕ್ಕಪಕ್ಕದ ಮನೆಯವರಾಗಿದ್ದಾರೆ. ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಹಳೇ ರೌಡಿ ಕ್ರಿಸ್ಟೋಫರ್‌ ಚಕ್ರವರ್ತಿ ಅಲಿಯಾಸ್‌ ಚಕ್ರೆ ಬ್ರೇನ್‌ ಸ್ಟ್ರೋಕ್‌ಗೆ ಬಲಿ

Exit mobile version