Site icon Vistara News

ಪತಿಯಿಂದಲೇ ಹತ್ಯೆಯಾದ ಗ್ರಾಪಂ ಸದಸ್ಯೆ; ಕೌಟುಂಬಿಕ ಕಲಹವೇ ಕಾರಣವಾಯ್ತಾ?

murder

ಶಿರಸಿ: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ, ಇಲ್ಲಿ ಗಂಡ-ಹೆಡತಿ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಪಾಳ ಗ್ರಾಮದಲ್ಲಿ ನಡೆದಿದೆ.

ಕೊಲೆ ಮಾಡಿದ ನಂತರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೊಲೆಯಾದ ಅಕ್ಕಮ್ಮ ಬಸವರಾಜ ಮೇಲಿನಮನೆ ಪಾಳಾ ಗ್ರಾ.ಪಂ ಸದಸ್ಯೆಯಾಗಿದ್ದರು. ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿ ಸಾವುನೋವಿನ ಮದ್ಯೆ ಹೋರಾಡುತ್ತಿರುವ ಪತಿರಾಯ ಬಸವರಾಜ ಹುಬ್ಬಳ್ಳಿ ಕೀಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಸವರಾಜ್‌ ಮಚ್ಚಿನಿಂದ ಪತ್ನಿಯ ಕುತ್ತಿಗೆಯನ್ನು ಕೊಯ್ದು ಕೊಲೆ‌ ಮಾಡಿದ್ದಾನೆ.

ಕೌಟುಂಬಿಕ ಕಲಹದಲ್ಲಿ ಈ ಕ್ರೌರ್ಯ ನಡೆದಿದೆ ಎಂದು ಪೋಲಿಸರು ಶಂಕಿಸಿದ್ದಾರೆ. ಬಸವರಾಜ್‌ ಮಾನಸಿಕವಾಗಿ ಅಸ್ವಸ್ತನಾಗಿದ್ದ ಎಂದು ಗ್ರಾಮಸ್ತರು ತಿಳಿಸಿದ್ದಾರೆ. ಮುಂಡಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಇದನ್ನೂ ಓದಿ| ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ, ಗಂಡನೇ ಕೊಲೆಗಾರ ಎಂದ ಕುಟುಂಬ

Exit mobile version