Site icon Vistara News

ತಲೆ ಕೂದಲು ಉದುರಿದ್ದರಿಂದ ನೊಂದ ಯುವತಿ ನೇಣಿಗೆ ಶರಣು

hair care

ಮೈಸೂರು: ದಟ್ಟವಾದ, ರೇಷ್ಮೆಯಂತಹ ಕೂದಲು ಇರಬೇಕು ಎನ್ನುವ ಆಸೆ ಬಹುತೇಕ ಎಲ್ಲ ಹೆಣ್ಣು ಮಕ್ಕಳಲ್ಲೂ ಇರುತ್ತದೆ. ಇದಕ್ಕಾಗಿ ಹಲವು ಮನೆ ಮದ್ದು ಸೇರಿದಂತೆ ನಾನಾ ಚಿಕಿತ್ಸೆಯ ಮೊರೆ ಹೋಗುವುದೂ ಉಂಟು. ಇತ್ತೀಚಿನ ಲೈಫ್‌ಸ್ಟೈಲ್‌ನಿಂದಾಗಿ ತಲೆ ಕೂದಲು ಉದುರುವುದು ಸರ್ವೇ ಸಾಮಾನ್ಯ ಎಂಬಂತೆಯೂ ಆಗಿದೆ. ಆದರೆ, ಇಲ್ಲೊಬ್ಬ ಯುವತಿ ತಲೆ ಕೂದಲು ಉದುರುವ ಸಮಸ್ಯೆಯಿಂದ ಬೇಸತ್ತು ನೇಣಿಗೆ ಶರಣಾಗಿದ್ದಾಳೆ.

ಮೈಸೂರಿನ ರಾಘವೇಂದ್ರ ನಗರ ಬಡಾವಣೆಯ ಕಾವ್ಯಶ್ರೀ ಎಂಬ 22 ವರ್ಷದ ಯುವತಿಯೇ ನೇಣಿಗೆ ಶರಣಾಗಿರುವ ದುರ್ದೈವಿ. ಈಕೆಗೆ ಕಳೆದ ಹಲವು ತಿಂಗಳಿನಿಂದ ಕೂದಲು ಉದುರುವಿಕೆ ಸಮಸ್ಯೆ ಕಾಡುತ್ತಿತ್ತು. ಕಾವ್ಯಶ್ರೀಗೆ ಪತ್ಮಂಡೆ ಎಂಬ ಕೂದಲು ಉದುರುವ ಸಮಸ್ಯೆ ಇತ್ತು. ಇದು ಆಕೆಯ ನೋವಿಗೆ ಕಾರಣವಾಗಿತ್ತು. ಈ ಸಮಸ್ಯೆ ಪರಿಹಾರಕ್ಕಾಗಿ ಕಾವ್ಯಶ್ರೀ ಹಲವಾರು ತರಹದ ಚಿಕಿತ್ಸೆಯನ್ನು ಪಡೆದುಕೊಂಡಿದ್ದಳು. ಆದರೆ ಯಾವ ಚಿಕಿತ್ಸೆಯೂ ಫಲಕಾರಿಯಾಗಿರಲಿಲ್ಲ. ಈ ಸಮಸ್ಯೆಯಿಂದ ಈಕೆ ತನ್ನ ಸಂಪೂರ್ಣ ತಲೆ ಕೂದಲನ್ನು ಕಳೆದುಕೊಳ್ಳಬೇಕಾಯಿತು. ಇದು ಕಾವ್ಯಶ್ರೀಯನ್ನು ಖಿನ್ನತೆಗೆ ದೂಡಿತ್ತು.

ಇದರಿಂದ ಬೇಸತ್ತ ಕಾವ್ಯಶ್ರೀ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಕ್ಕ ಎಷ್ಟೇ ಗೋಗರೆದರೂ ಕೇಳದೆ ನೇಣು ಬಿಗಿದುಕೊಂಡ ಎಂಬಿಬಿಎಸ್‌ ವಿದ್ಯಾರ್ಥಿ

Exit mobile version