Site icon Vistara News

Accident | ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು, ಮುಗಿಲು ಮುಟ್ಟಿದ ಆಕ್ರಂದನ

accident

ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-೫೨ರಲ್ಲಿ ಕಾರು ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿದ್ದು, ಮೃತ ಯುವಕರನ್ನು ಪಡಗಾನೂರು ತಾಂಡಾದ ಬಾಬು ಚೌಹಾಣ್‌ ಮತ್ತು ಅಶೋಕ ನಾಯಕ್ ಎಂದು ಗುರುತಿಸಲಾಗಿದೆ.

ಇವರಿಬ್ಬರೂ ತಾಂಡಾದ ಯುವಕರಾಗಿದ್ದು ಮನೆಯಿಂದ ಹೊರಟು ಹೆದ್ದಾರಿಗೆ ಬಂದು ಸ್ವಲ್ಪವೇ ದೂರದಲ್ಲಿ ಈ ಘಟನೆ ನಡೆದಿದೆ. ಕಾರು ಮತ್ತು ಬೈಕ್‌ಗಳು ಡಿಕ್ಕಿ ಹೊಡೆದುಕೊಂಡಿವೆ. ಘಟನೆ ತಿಳಿಯುತ್ತಿದ್ದಂತೆಯೇ ಜನರು ಸೇರಿದ್ದು ಆಗ ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಈ ನಡುವೆ, ಊರಿನ ಮಂದಿ, ಕುಟುಂಬಿಕರು, ಮಹಿಳೆಯರು ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಬಾಳಿ ಬದುಕಬೇಕಾಗಿದ್ದ, ಸಣ್ಣ ವಯಸ್ಸಿನ ಹುಡುಗರ ಸಾವು ಅವರನ್ನು ಕಂಗೆಡಿಸಿದೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನದಿಯಲ್ಲಿ ತೇಲಿ ಬಂತು ರುಂಡವಿಲ್ಲದ ಬಾಲಕನ ಶವ
ಬೆಳಗಾವಿ ಜಿಲ್ಲೆಯ ಬೆಳಗಾವಿ ಜಿಲ್ಲೆಯ ಶಿರಢಾಣ ಹಾಗೂ ಝಾಂಗಟಿಹಾಳ ಬಳಿ ಘಟಪ್ರಭಾ ನದಿಯಲ್ಲಿ ಬಾಲಕನ ಶವವೊಂದು ತೇಲಿಬಂದಿದೆ. ಈ ಶವಕ್ಕೆ ರುಂಡವೇ ಇಲ್ಲದಿರುವುದು ಭಾರಿ ಆತಂಕ ಮೂಡಿಸಿದೆ. ಇದು ಯಾರೋ ತಲೆ ಕಡಿದು ನದಿಗೆ ಹಾಕಿದ ರೀತಿಯಲ್ಲಿ ಕಂಡುಬರುತ್ತಿದೆ. ೧೨ರಿಂದ ೧೫ ವರ್ಷದ ಬಾಲಕನ ರುಂಡವಿಲ್ಲದ ಶವ ಇದಾಗಿದೆ.

ಶವವನ್ನು ಗೋಣಿ ಚೀಲದಲ್ಲಿ ತುಂಬಿ ನದಿಯಲ್ಲಿ ತೇಲಿ ಬಿಟ್ಟಿರುವ ಸಾಧ್ಯತೆಗಳಿವೆ. ಸ್ಥಳಕ್ಕೆ ಹುಕ್ಕೇರಿ ಪೊಲೀಸರು ದೌಡಾಯಿಸಿದ್ದಾರೆ.

ಇದನ್ನೂ ಓದಿ| Road Accident | ವಾಯವ್ಯ ಸಾರಿಗೆ-ಬೈಕ್‌ ನಡುವೆ ಅಪಘಾತ; ಇಬ್ಬರು ಬೈಕ್‌ ಸವಾರರು ಸಾವು

Exit mobile version