Site icon Vistara News

Karnataka Election 2023 : ಕಾಲಿಗೆ ಮೊಬೈಲ್​ ಕಟ್ಟಿಕೊಂಡು ಎಣಿಕೆ ಕೇಂದ್ರಕ್ಕೆ ಬಂದ ಏಜೆಂಟ್​

Karnataka Election

#image_title

ಉಡುಪಿ: ಮತ ಎಣಿಕೆ ಏಜೆಂಟ್​ ಒಬ್ಬ ಕಾಲಿಗೆ ಮೊಬೈಲ್ ಕಟ್ಟಿಕೊಂಡು ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ತಪಾಸಣೆ ನಡೆಸಿದ ಪೊಲೀಸರು ಆತನನ್ನು ಹಿಡಿದು ವಾಪಸ್​ ಕಳುಹಿಸಿದ ಘಟನೆಯೂ ನಡೆದಿದೆ. ಬಿಜೆಪಿಯ ಬೂತ್​ ಏಜೆಂಟ್​ ಕೇಸರಿ ಶಾಲಿನ ಸಮೇತ ಮತ ಕೇಂದ್ರಕ್ಕೆ ಪ್ರವೇಶ ಪಡೆಯಲು ಯತ್ನಿಸಿದ್ದರು.

ಮತ ಎಣಿಕೆ ಕೇಂದ್ರದ ಒಳಗೆ ಆಯಾಯ ಪಕ್ಷದ ಏಜೆಂಟರುಗಳಿಗೆ ಬರಲು ಅವಕಾಶವಿದೆ. ಆದರೆ, ಅವರು ಸಂವಹನ ಸಾಧನ ಸೇರಿದಂತೆ ಯಾವುದೇ ಡಿಜಿಟಲ್​ ವಸ್ತುಗಳನ್ನು ಕೊಂಡೊಯ್ಯುಂತಿಲ್ಲ. ಆದರೆ ಬಿಜೆಪಿ ಏಜೆಂಟ್​ ಕೇಸರಿ ಶಾಲಿನ ಜತೆಗೆ ಪ್ಯಾಂಟ್​ನೊಳಗೆ ಮೊಣಕಾಲಿಗೆ ಮೊಬೈಲ್​ ಕಟ್ಟಿಕೊಂಡು ಹೋಗಿದ್ದರು. ತಪಾಸಣೆ ನಡೆಸುವ ವೇಳೆ ಪೊಲೀಸರಿಗೆ ಮೊಬೈಲ್ ಇಟ್ಟಿರುವುದು ಪತ್ತೆಯಾಗಿದೆ. ತಕ್ಷಣ ಅವರನ್ನು ಹಿಂದಕ್ಕೆ ಕಳುಹಿಸಲಾಯಿತು.

ಏಜೆಂಟ್​ ತನ್ನ ಕಾಲಿಗೆ ಪ್ಯಾಕಿಂಗ್​ ಟೇಪ್​ ಬಳಸಿಕೊಂಡು ಮೊಣಕಾಲಿಗೆ ಮೊಬೈಲ್​ ಕಟ್ಟಿಕೊಂಡು ಹೋಗಿದ್ದರು. ಪೊಲೀಸರು ತಡೆದ ಬಳಿಕ ಮರು ಮಾತನಾಡದೇ ವಾಪಸ್ ಹೋಗಿದ್ದರು.

Exit mobile version