Site icon Vistara News

ಜ್ಯೋತಿಷಿ ಕೈ ಕಾಲು ಕಟ್ಟಿ ದರೋಡೆ, ಯುವತಿ ಸೇರಿ ಆರು ಮಂದಿಯ ಸೆರೆ

gold recovery

ಬೆಂಗಳೂರು: ಜ್ಯೋತಿಷಿ ಪ್ರಮೋದ್ ಎಂಬುವರ ಕೈಕಾಲು ಕಟ್ಟಿ ಚಿನ್ನಾಭರಣ, ನಗದು ದೋಚಿದ್ದ ಪ್ರಕರಣ ಸಂಬಂಧ ಕೆಂಗೇರಿ ಠಾಣಾ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಡಾಮಿನಿಕ್ ರಿಚರ್ಡ್, ಮೇಘನಾ, ರಾಜು, ಸುರೇಶ್, ಪದ್ಮ ಹಾಗೂ ವಿನೋದ್ ಎಂದು ಬಂಧಿತರು. ಇವೆರಲ್ಲರೂ ಆಡುಗೋಡಿಯ ವಿನಾಯಕ ನಗರದವರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಇಡೀ ಪ್ರಕರಣದ ಪ್ರಮುಖ ರೂವಾರಿ ಮೇಘನಾ ಎಂಬ ಸಂಗತಿ ತನಿಖೆ ಮೂಲಕ ಹೊರ ಬಿದ್ದಿದೆ. ಈಕೆ ನಾಲ್ಕೈದು ತಿಂಗಳ ಹಿಂದೆ ಜ್ಯೋತಿಷ್ಯ ಕೇಳಲು ಪ್ರಮೋದ್​ ಬಳಿ ಬಂದಿದ್ದಳು. ಈ ವೇಳೆ ಜ್ಯೋತಿಷಿ ಪ್ರಮೋದ್​ ಬಳಿ ಆತ್ಮೀಯತೆ ಬೆಳೆಸಿಕೊಂಡು ಹಣದ ಸಹಾಯವನ್ನು ಕೇಳಿದ್ದಳು. ಆಗ ಜ್ಯೋತಿಷಿ ಹಣವಿಲ್ಲ ಮುಂದೆ ನೋಡೋಣ ಎಂದಿದ್ದರು.

ಪ್ರಮೋದ್​ ಬಳಿಯಿದ್ದ ಆಭರಣಗಳನ್ನು ನೋಡಿ ಮೇಘನಾ ದರೋಡೆ ಮಾಡಲು ಸಂಚು ರೂಪಿಸಿದ್ದಳು. ಅದಕ್ಕಾಗಿ ತನ್ನದೇ ಏರಿಯಾದ ಯುವಕರನ್ನು ಒಟ್ಟುಗೂಡಿಸಿ ಜುಲೈ 9ರಂದು ದರೋಡೆ ಮಾಡಿಸಿದ್ದಳು. ಈಗ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ 22 ಲಕ್ಷದ 55 ಸಾವಿರ ರೂ. ಮೌಲ್ಯದ ಚಿನ್ನಾಭರಣ, 64 ಸಾವಿರ ರೂ. ನಗದು ಮತ್ತು ಕಾರನ್ನು ಜಪ್ತಿ ಮಾಡಲಾಗಿದೆ.

Exit mobile version