Site icon Vistara News

Animals attack : ಚನ್ನಪಟ್ಟಣದಲ್ಲಿ ಒಂಟಿ ಸಲಗ ದಾಳಿ, ರೈತನ ಕಾಲು ಮುರಿತ; ತಿ. ನರಸೀಪುರದಲ್ಲಿ ಬೋನಿಗೆ ಬಿತ್ತು ಚಿರತೆ

Elephant attack in channapatna

#image_title

ರಾಮನಗರ/ಮೈಸೂರು: ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ (Animals attack) ನಡೆಸಿ ಒಂದು ದನವನ್ನು ಕೊಂದು ಹಾಕಿದೆ. ಒಬ್ಬ ವ್ಯಕ್ತಿಯ ಕಾಲು ಮುರಿದಿದೆ. ಇದೇವೇಳೆ ಮೈಸೂರಿನ ತಿ. ನರಸೀಪುರದಲ್ಲಿ ಒಂದು ಚಿರತೆ ಬೋನಿಗೆ ಬಿದ್ದಿದೆ.

ಚನ್ನಪಟ್ಟಣ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ಒಂಟಿ ಸಲಗ ಬೆಳಗ್ಗೆಯೇ ಅವಾಂತರ ಎಬ್ಬಿಸಿದ್ದು, ದಂತದಿಂದ ಚುಚ್ಚಿ ಹಸುವಿನ ಹೊಟ್ಟೆ ಸೀಳಿ ಸಾಯಿಸಿದೆ. ಅದೇ ವೇಳೆಗೆ ಬೆಳಗ್ಗೆ ಜಮೀನಿಗೆ ತೆರಳಿದ್ದ ಗೊಲ್ಲರದೊಡ್ಡಿ ಗ್ರಾಮದ ರೈತ ಗೋಪಾಲ್ ಅವರ ಕಾಲು ಮುರಿತಕ್ಕೊಳಗಾಗಿದೆ.

ಗಾಯಾಳು ಗೋಪಾಲ್ ಅವರನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಜೋರಾಗಿದೆ.

ಮೈಸೂರಲ್ಲಿ ಮತ್ತೊಂದು ಚಿರತೆ ಸೆರೆ
ಮೈಸೂರು: ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿಗೆ ಮತ್ತೊಂದು ಚಿರತೆ ಬಿದ್ದಿದೆ. ತಾಲೂಕಿನ ಮುಸುವಿನಕೊಪ್ಪಲು ಗ್ರಾಮದಲ್ಲಿ ಚಂದ್ರಪ್ಪ ಎಂಬುವರ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ಈ ಚಿರತೆ ಬಿದ್ದಿದೆ. ಕೆಲವು ದಿನಗಳ ಹಿಂದೆ ಇದೇ ಜಮೀನಿನಲ್ಲಿ ಇಡಲಾಗಿದ್ದು ಬೋನಿಗೆ ಎರಡು ಚಿರತೆಗಳು ಬಿದ್ದಿದ್ದವರು.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಈಗ ಚಿರತೆಯನ್ನು ಮೈಸೂರಿನ ಅರಣ್ಯ ಭವನಕ್ಕೆ ರವಾನೆ ಮಾಡಲಾಗಿದೆ.

Exit mobile version