Site icon Vistara News

ಚಿಕ್ಕಬಳ್ಳಾಪುರದಲ್ಲಿ ಸಿಕ್ಕಸಿಕ್ಕವರ ಮೇಲೆ ಲಾಂಗ್‌ ಬೀಸಿದ್ದ ವ್ಯಕ್ತಿಯ ಬಂಧನ

ಚಾಕು ಇರಿತ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬೀಸಿದ್ದ ಅರ್ಜುನ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಫುರ ನಗರದ ಬಾಪೂಜಿ ನಗರದ ನಿವಾಸಿ ಅರ್ಜುನ್, ಬೈಕ್ ನಲ್ಲಿ ಓಡಾಡುತ್ತಾ ಸಿಕ್ಕಸಿಕ್ಕವರ ಮೇಲೆ ಲಾಂಗ್‌ ಬೀಸಿದ್ದ. ಲಾಂಗ್ ಏಟಿಗೆ 7 ಜನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಂಧಿತ ಆರೋಪಿ ಅರ್ಜುನ್

ಮೂವರು ಮಹಿಳೆಯರು ಮತ್ತು ೪ ಜನ ಪುರುಷರಿಗೆ ಗಾಯವಾಗಿದೆ. ಗಾಯಾಳುಗಳ ಪೈಕಿ ಮುನಿರೆಡ್ಡಿ ಎನ್ನುವವರ ಸ್ಥಿತಿ ಚಿಂತಾಜನಕವಾಗಿದೆ. ಚಿಕ್ಕಬಳ್ಳಾಫುರ ತಾಲೂಕಿನ ಕಳವಾರದಲ್ಲಿರುವ ದೇವಸ್ಥಾನದ ಬಳಿ ಆರೋಪಿಯ ಬಂಧನವಾಗಿದೆ. ಆರೋಪಿಯಿಂದ ಬೈಕ್‌, ಚಾಕು ಮಚ್ಚು ಲಾಂಗ್ ಅನ್ನು ಜಪ್ತಿ ಮಾಡಲಾಗಿದೆ.

Exit mobile version