Site icon Vistara News

Assault case : ನಿವೃತ್ತ ಇನ್ಸ್‌ಪೆಕ್ಟರ್‌ ಕೈ ಕತ್ತರಿಸಿದ ಕುಡುಕರು!

Ex police Inspector Krishaiah assaulted by drunkards

ರಾಮನಗರ: ಕೃಷಿ ಜಮೀನಿನಲ್ಲಿ ಕುಡಿದು ಮೋಜು ಮಸ್ತಿ ಮಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದಕ್ಕೆ‌ ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ (Assault case) ಮಾಡಿದ್ದಾರೆ. ರಾಮನಗರ ತಾಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಕೃಷಯ್ಯ (61) ಹಲ್ಲೆಗೊಳಗಾದವರು.

ನಿನ್ನೆ ಸಂಜೆ ಕೃಷ್ಣಯ್ಯ ಅವರ ಜಮೀನಿನಲ್ಲಿ ಕೂತು ಯುವಕರ ಗುಂಪು ಎಣ್ಣೆ ಕುಡಿಯುತ್ತಿದ್ದರು. ಕುಡಿದು ಎಲ್ಲೆಂದರಲ್ಲಿ ಬಾಟಲಿ ಬಿಸಾಡಿದ್ದರು. ಹೀಗಾಗಿ ಇದನ್ನು ಪ್ರಶ್ನಸಿದ್ದಕ್ಕೆ ಮಹಾದೇವ್,‌ ಹನುಮ,‌ ಕಿರಣ್ ಹಾಗೂ ಅಭಿ ಎಂಬುವವರು ಮಚ್ಚಿನಿಂದ ಕೃಷ್ಣಯ್ಯ ಅವರ ಕೈ ಕತ್ತರಿಸಿದ್ದಾರೆ.

ಗಾಯಗೊಂಡ ಕೃಷ್ಣಯ್ಯ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳ ಪೈಕಿ ಕಿರಣ್ ಎಂಬುವವರನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.

ಪತಿಯಿಂದ ದೂರಾಗಿದ್ದ ಶಿಕ್ಷಕಿಗೆ ಚಾಕು ಹಾಕಿದ ಫೈಟರ್‌!

ಶಿವಮೊಗ್ಗ: ಇಲ್ಲಿನ ಕೆ.ಆರ್.ಪುರಂನ ತಿಮ್ಮಪ್ಪನಕೊಪ್ಪಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಿಕ್ಷಕಿಗೆ ವ್ಯಕ್ತಿಯೊಬ್ಬ ದಾಳಿ ಮಾಡಿ (Attempt murder Case) ಚಾಕು ಹಾಕಿದ್ದಾನೆ. ಫೈಟರ್ ಮುನ್ನಾ ಎಂಬಾತ ಎಂಬಾತ ಆಜಾದ್ ಶಾಲೆಯ ಶಿಕ್ಷಕಿ ಫಾತಿಮಾಗೆ ಚಾಕು ಇರಿದಿದ್ದಾನೆ.

ಚಾಕು ಇರಿತಕ್ಕೆ ಒಳಗಾಗಿ ಗಾಯಗೊಂಡಿದ್ದ ಉರ್ದು ಶಾಲೆಯ ಶಿಕ್ಷಕಿ ಫಾತಿಮಾಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ನಿಂದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಶಿಕ್ಷಕಿ ಫಾತಿಮಾಗೆ ಮನಬಂದಂತೆ ಐದಾರು ಕಡೆ ಚಾಕುವಿನಿಂದ‌ ಇರಿದು ಫೈಟರ್ ಮುನ್ನಾ ಪರಾರಿ ಆಗಿದ್ದ. ಸದ್ಯ ಆತನೇ ಠಾಣೆಗೆ ತೆರಳಿ ಶರಣಾಗಿದ್ದಾನೆ. ಶಿಕ್ಷಕಿ ಫಾತಿಮಾ ಪತಿಯಿಂದ ದೂರವಾಗಿ ಒಬ್ಬಂಟಿಯಾಗಿ ವಾಸವಾಗಿದ್ದರು. ಮುನ್ನಾ ಪದೇಪದೆ ಪೀಡಿಸುತ್ತಿದ್ದ ಎನ್ನಲಾಗಿದೆ.

ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ರಾಜಿ ನಡೆದಿತ್ತು. ಹತಾಶೆಯಿಂದ ಶಿಕ್ಷಕಿಗೆ ಚಾಕುವಿನಿಂದ ಇರಿದಿರುವ ಶಂಕೆ ವ್ಯಕ್ತವಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version