Site icon Vistara News

Bagalkot News | ಬಹಿರ್ದೆಸೆಗೆ ಹೋದ ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು

Bagalkot News

ಬಾಗಲಕೋಟೆ : ಬಹಿರ್ದೆಸೆಗೆ ಹೋದ ಮಹಿಳೆಯನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಜಿಲ್ಲೆಯ (Bagalkot News) ಬೀಳಗಿ ತಾಲೂಕಿನ ರಬಕವಿ ಗ್ರಾಮದಲ್ಲಿ ಸಂಗೀತಾ ಹರಿಜನ(೩೪) ಕೊಲೆಯಾದ ಮಹಿಳೆ ಆಗಿದ್ದಾಳೆ.

ಕಳೆದ ಒಂದು ವರ್ಷದ ಹಿಂದೆ ಮೃತ ಮಹಿಳೆ ಸಂಗೀತಾ ಅವರ ಪತಿ ತೀರಿಕೊಂಡಿದ್ದರು. ಮೂವರು ಮಕ್ಕಳ‌ ಜತೆ ಮಹಿಳೆ ವಾಸವಿದ್ದಳು. ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಸಂಗೀತಾ ಅವರ ತವರು ಮನೆಯಾಗಿತ್ತು. ಗುರುವಾರ (ಆ.25) ಬೆಳಗ್ಗೆ ತೇರದಾಳದಿಂದ ಗಂಡನ ಮನೆಗೆ ಮಹಿಳೆ ಬಂದಿದ್ದಾಳೆ. ಮದ್ಯಾಹ್ನ ಗಲಗಲಿ ಗ್ರಾಮದಲ್ಲಿ ಸಂತೆಗೆ ಹೋಗಿ ಮನೆಗೆ ಬಂದಿದ್ದಳು. ರಾತ್ರಿ ೧೦ ಗಂಟೆ ವೇಳೆ ಮಹಿಳೆ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಮಹಿಳೆಯ ಕತ್ತು ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.

ಇದನ್ನೂ ಓದಿ | ಮುಂಡರಗಿಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ

ಬೀಳಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೈದವರು ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Exit mobile version