Site icon Vistara News

Crime news | ಮಗಳು ಅಂತರ್ಮತೀಯ ವಿವಾಹವಾದ ಸಿಟ್ಟಿನಿಂದ ಅಳಿಯನನ್ನು ಕೊಂದ ತಂದೆ

crime news

ಬಾಗಲಕೋಟೆ: ಮಗಳು ಅನ್ಯ ಸಮುದಾಯದವನನ್ನು ಪ್ರೀತಿಸಿ ಮದುವೆಯಾದ ರೊಚ್ಚಿನಿಂದ ಮಗಳ ಗಂಡನನ್ನೇ ತಂದೆಯೊಬ್ಬ ಕೊಂದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನಲ್ಲಿ ನಡೆದಿದೆ.

ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದ ಹನುಮಾನ್‌ ದೇವಸ್ಥಾನ ಬಳಿ ಹತ್ಯೆ ನಡೆದಿದೆ. ಭುಜಬಲ ಕರ್ಜಗಿ (೩೪) ಕೊಲೆಯಾದ ವ್ಯಕ್ತಿ. ತಮ್ಮನಗೌಡ ಕೊಲೆ ಮಾಡಿದಾತ. ತಮ್ಮನಗೌಡನ ಮಗಳು ಭಾಗ್ಯಶ್ರೀಯನ್ನು ಭುಜಬಲ ಮದುವೆಯಾಗಿದ್ದ. ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಭುಜಬಲ ಜೈನ ಸಮುದಾಯಕ್ಕೆ ಹಾಗೂ ಭಾಗ್ಯಶ್ರೀ ಕ್ಷತ್ರಿಯ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಒಂದು ವರ್ಷದ ಹಿಂದೆ ಪ್ರೀತಿಸಿ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದರು. ನಂತರ ಊರಲ್ಲೇ ಬಂದು ವಾಸವಾಗಿದ್ದರು.

ಮಗಳು ಅನ್ಯಮತೀಯನನ್ನು ಮದುವೆಯಾದ ಸೇಡು ಇಟ್ಟುಕೊಂಡಿದ್ದ ಮಾವ, ಮೊನ್ನೆ ರಾತ್ರಿ 8.30ರ ವೇಳೆಗೆ ಅಳಿಯನ ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಆರೋಪಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸಿದ್ದಾರೆ. ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder Case | ಮಾರಣಾಂತಿಕ ಹಲ್ಲೆ ‌ನಡೆಸಿ ದಲಿತ ವ್ಯಕ್ತಿಯ ಕೊಲೆ; ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Exit mobile version