Site icon Vistara News

ಆಸ್ತಿ ವಿವಾದ: ಅಳಿಯನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ!

ಅಳಿಯ ಸಂಗಪ್ಪ ಕೋಟಿ

ಬಾಗಲಕೋಟೆ : ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಅಳಿಯನನ್ನು ಕೊಂದು ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿರೂರು ಗ್ರಾಮದ ರಮೇಶ್ ಅಂಗಡಿ(42) ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಅಳಿಯ ಸಂಗಪ್ಪ ಕೋಟಿಯನ್ನು ಸೋದರಸಂಬಂಧಿ ಸುನಿಲ್‌ ಜೊತೆಗೂಡಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ.

ಇದನ್ನೂ ಓದಿ | ಬಾಗಲಕೋಟೆ BJP ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರುದ್ಧ ಆಸ್ತಿ ವಿಚಾರವಾಗಿ ದಬ್ಬಾಳಿಕೆ ಆರೋಪ

ಮೇ 23 ರಂದು ಪತ್ನಿಯ ತಮ್ಮನ ಕೊಲೆ‌ ಮಾಡಿ ರಮೇಶ್‌ ನಾಪತ್ತೆಯಾಗಿದ್ದ. ಇದಕ್ಕೂ ಮುಂಚೆ  ಪತ್ನಿಗೆ ಕರೆ ಮಾಡಿ ನಿನ್ನ ತಮ್ಮನ ಕಥೆ ಮುಗಿಸಿದ್ದೇನೆ. ನಾನು ಸಾಯುತ್ತೇನೆ ಎಂದು ಹೇಳಿದ್ದ.

ಸೋದರಸಂಬಂಧಿ ಸುನಿಲ್‌ ವಾಲಿ

ಇದೀಗ ಕ್ರಿಮಿನಾಷಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ರಮೇಶ್‌ ಅಂಗಡಿ ಶವ ಪತ್ತೆಯಾಗಿದೆ. ಅಳಿಯನ ಕೊಲೆಗೈದ ಜಾಗದಿಂದ ನೂರು ಮೀಟರ್ ದೂರದ ಹೊಲವೊಂದರಲ್ಲಿ ಶವ ಪತ್ತೆಯಾಗಿದ್ದು, ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | ಅಳಿಯನ ಕೊಲೆ ಮಾಡಿ ತಪ್ಪೊಪ್ಪಿಗೆ ಪತ್ರ ಸ್ಟೇಟಸ್‌ ಹಾಕಿದ ಮಾವ

Exit mobile version