ಬಾಗಲಕೋಟೆ: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ (Road Accident) ಸಂಭವಿಸಿ ಮದುವೆಗೆ ತೆರಳಿದ್ದ ತಾಯಿ ಮತ್ತು ಮಗ ದಾರುಣವಾಗಿ ಮೃತಪಟ್ಟಿದ್ದಾರೆ (Mother and son dead). ಒಂದು ಮಗು ಸೇರಿ ಮೂವರಿಗೆ ಗಾಯಗಳಾಗಿವೆ. ಬಾಗಲಕೋಟೆ ಜಿಲ್ಲೆಯ (Bagalakote news) ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಹೊರವಲಯದಲ್ಲಿ ಈ ಅವಘಡ ಸಂಭವಿಸಿದೆ.
ಹನಮವ್ವ ಬಸಪ್ಪ ಕಠಾಣಿ (63), ಕೆಂಚಪ್ಪ ಬಸಪ್ಪ ಕಠಾಣಿ (32) ಮೃತ ತಾಯಿ ಮತ್ತು ಮಗ. ಹನಮವ್ವ ಮತ್ತು ಕೆಂಚಪ್ಪ ಅವರು ಮುಧೋಳದಿಂದ ಹಲಗಲಿ ಕಡೆ ಹೊರಟಿದ್ದರು. ಅವರು ಒಂದು ಮದುವೆ ಕಾರ್ಯಕ್ಕೆ ತೆರಳಿದ್ದರು. ಈ ನಡುವೆ, ಹಲಗಲಿಯಿಂದ ತೋಟಕ್ಕೆ ಮತ್ತೊಂದು ಬೈಕ್ ತೆರಳುತ್ತಿತ್ತು. ಈ ಎರಡೂ ಬೈಕ್ಗಳು (Bikes Rams each other) ಗ್ರಾಮದ ಹೊರವಲಯದಲ್ಲಿ ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿವೆ.
ಘಟನೆಯಲ್ಲಿ ತಾಯಿ ಮತ್ತು ಮಗ ಮೃತಪಟ್ಟರೆ, ಮತ್ತೊಂದು ಬೈಕ್ ನಲ್ಲಿದ್ದ ಮಗು ಸೇರಿ ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮುಧೋಳದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಡಿಕ್ಕಿ ರಭಸಕ್ಕೆ ಎರಡೂ ಬೈಕ್ಗಳು ನಜ್ಜುಗುಜ್ಜಾಗಿವೆ. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಹಲಗಲಿಯಲ್ಲಿ ನಡೆದಿರುವ ಘಟನೆ ಇದಾಗಿದೆ.
ಇದನ್ನೂ ಓದಿ: Road Accident: ಕೆಎಸ್ಆರ್ಟಿಸಿ ಬಸ್-ಬೈಕ್ ನಡುವೆ ಡಿಕ್ಕಿ; ಸವಾರರಿಬ್ಬರು ಸಾವು
ನಿಂತಿದ್ದ ಎತ್ತಿನ ಗಾಡಿಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಮಕ್ಕಳ ಸಹಿತ ಮೂವರ ದಾರುಣ ಸಾವು
ಬಳ್ಳಾರಿ : ನಿಂತಿದ್ದ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ (Bike hits Bullock Cart) ಓರ್ವ ವ್ಯಕ್ತಿ, ಇಬ್ಬರು ಮಕ್ಕಳು ಮೃತ ಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ (Ballary News) ಹೊಸ ದರೋಜಿ ಸಮೀಪ (Road Accident) ನಡೆದಿದೆ.
ಮೃತನು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಜಂಬುನಾಥ ಹಳ್ಳಿಯ ವೆಂಕಟೇಶ್(45), ಆಶಾ(8), ಅಖಿಲಾ(6) ಮೃತ ಪಟ್ಟಿದ್ದಾರೆ. ಜಂಬಕ್ಕ ಮತ್ತು ಸರಸ್ವತಿ ಗಾಯಗೊಂಡಿದ್ದಾರೆ.
ಜಂಬಕ್ಕ ಅವರ ತಮ್ಮ ಮಕ್ಕಳಾದ ಸರಸ್ವತಿ, ಆಶಾ ಮತ್ತು ಅಖಿಲಾಳೊಂದಿಗೆ ತಮ್ಮ ತವರೂರು ಆಂಧ್ರದ ಅರಿಕೇರಿಗೆ ಹೋಗಿ ಉಡಿತುಂಬಿಕೊಂಡು ಗಂಡನಮನೆ ಜಂಬುನಾಥನ ಹಳ್ಳಿಗೆ ಬಳ್ಳಾರಿವರೆಗೆ ಬಸ್ಸಿನಲ್ಲಿ ಬಂದಿದ್ದಾರೆ. ಜಂಬುನಾಥ ಹಳ್ಳಿಯ ಗ್ರಾಮದ ವೆಂಕಟೇಶ್ ಅವರು ಬಳ್ಳಾರಿಯಿಂದ ಬೈಕ್ ನಲ್ಲಿ ಊರಿಗೆ ಹೋಗುತ್ತಿದ್ದಾನೆ. ಇವರಿಗೆ ಊರಿಗೆ ಬಿಡುವುದಾಗಿ ಕರೆದುಕೊಂಡು ಹೋಗಿದ್ದಾನೆ.
ಬೈಕ್ ನಿಂತ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಮೃತ ಪಟ್ಟಿದ್ದಾರೆ. ಜಂಬಕ್ಕ ಮತ್ತು ಸರಸ್ವತಿಗೆ ಗಾಯಗಳಾಗಿದ್ದು ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.