Site icon Vistara News

Road Accident | ಮರಕ್ಕೆ ಕಾರು ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಸಾವು

Road Accident

ಬಾಗಲಕೋಟೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಬಸರಿಕಟ್ಟಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಬೀಳಗಿ ಪಟ್ಟಣ‌ದ ನಿವಾಸಿ ಪ್ರಕಾಶ್ ಕಳ್ಳಿಮನಿ (೩೩) ಮೃತ ಯುವಕ. ವೇಗವಾಗಿ ಬರುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜು ಗುಜ್ಜಾಗಿದೆ.

ಸಾಲದ ಹೊರೆಯಿಂದ ಮನನೊಂದು ಯುವಕ ನೇಣಿಗೆ ಶರಣು
ಬಾಗಲಕೋಟೆ ನಗರದ ಶಕ್ತಿ ಚಿತ್ರಮಂದರಿದ ಬಳಿ‌ಯ ಲಾಡ್ಜ್‌ನಲ್ಲಿ ಸಾಲದ ಹೊರೆಯಿಂದ ಮನನೊಂದು ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ. ನವನಗರ ನಿವಾಸಿ ಅಬೂ ಬಖರ್ ಬಾದಾಮಿ (೨೭) ನೇಣಿಗೆ ಶರಣಾದ ವ್ಯಕ್ತಿ. ಈತ ಗದ್ದನಕೇರಿ ಕ್ರಾಸ್‌ನಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ. ಬಾಗಲಕೋಟೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.

ಇದನ್ನೂ ಓದಿ | Delhi School | 5ನೇ ತರಗತಿ ಬಾಲಕಿಯನ್ನು ಶಾಲೆಯ ಮೊದಲನೆ ಅಂತಸ್ತಿನಿಂದ ಹೊರಗೆ ಎಸೆದ ಶಿಕ್ಷಕಿ!

Exit mobile version