Site icon Vistara News

Bande Mutt Seer | ಬಂಡೆ ಮಠ ಶ್ರೀ ಸಾವಿನ ತನಿಖೆ ಪೂರ್ಣಗೊಳಿಸಿದ ಪೊಲೀಸ್​; ಇಂದು ಚಾರ್ಜ್​ಶೀಟ್​ ಸಲ್ಲಿಕೆ

Bande Mutt Seer

ರಾಮನಗರ: ಕಂಚುಗಲ್ ಬಂಡೆಮಠ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆ ಮುಕ್ತಾಯಗೊಳಿಸಿದ ಮಾಗಡಿ ಪೊಲೀಸರು, ಇಂದು ಮಾಗಡಿ ಕೋರ್ಟ್​​ಗೆ ಚಾರ್ಜ್​ಶೀಟ್​​ ಸಲ್ಲಿಸಲಿದ್ದಾರೆ. ಮಾಗಡಿ ಠಾಣೆ ಇನ್ಸ್​ಪೆಕ್ಟರ್​ ರವಿ ಅವರು ಇಂದು ಕೋರ್ಟ್​​ಗೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಿದ್ದಾರೆ.

ಅಕ್ಟೋಬರ್‌ ೨೪ರಂದು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಬಸವಲಿಂಗ ಶ್ರೀಗಳು ಮೂರು ಪುಟಗಳ ಡೆತ್‌ನೋಟ್‌ ಬರೆದಿಟ್ಟಿದ್ದರು. ಇದರಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಒಬ್ಬಳು ಯುವತಿ ಕಾರಣ ಎಂಬುದು ಗೊತ್ತಾಗಿತ್ತು. ಈ ಕೇಸ್​​ನಲ್ಲಿ ನೀಲಾಂಬಿಕೆ, ರೇಣುಕಾರಾಧ್ಯ, ವಕೀಲ ಮಹದೇವಯ್ಯ ಬಿ.ಸಿ ಸುರೇಶ್ ಎಂಬುವರು ಆರೋಪಿಗಳಾಗಿದ್ದು, ಈಗಾಗಲೇ ಜೈಲುಪಾಲಾಗಿದ್ದಾರೆ.

ಇದರಲ್ಲಿ ಬಂಡೆಮಠದ ಸ್ವಾಮೀಜಿ ಉಲ್ಲೇಖಿಸಿದ್ದ ಯುವತಿ ನೀಲಾಂಬಿಕೆ ಆಗಿದ್ದು ಆಕೆಯೂ ಈಗಾಗಲೇ ತಪ್ಪೊಪ್ಪಿಕೊಂಡಿದ್ದಾಳೆ. ಹೌದು ನಾನು ಸ್ವಾಮೀಜಿ ಮೇಲೆ ಸೇಡು ತೀರಿಸಿಕೊಳ್ಳಲೆಂದೇ ಈ ರೀತಿ ಮಾಡಿದೆ ಎಂದು ಹೇಳಿದ್ದಾಳೆ. ಎಂಜಿನಿಯರಿಂಗ್​ ವಿದ್ಯಾರ್ಥಿನಿಯಾದ ನೀಲಾಂಬಿಕೆ ಹಿಂದೊಮ್ಮೆ ಬಂಡೆಮಠದ ಸ್ವಾಮೀಜಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಳು. ಸ್ವಾಮಿಜಿಯೊಬ್ಬ ಹೆಣ್ಣುಬಾಕ, ಹೆಣ್ಣಿನ ಮೋಹ ಇದೆ ನಾಲಿಗೆ ಹರಿಬಿಟ್ಟಿದ್ದಳು. ಅದನ್ನೆಲ್ಲ ಬಂಡೆ ಮಠದ ಸ್ವಾಮೀಜಿ ಆಡಿಯೊ ರೆಕಾರ್ಡ್​ ಮಾಡಿ, ನೀಲಾಂಬಿಕೆಗೆ ಅವಮಾನಿಸಿದ್ದರು. ಅದೇ ಸೇಡಿಗಾಗಿ ಅವಳು ಸ್ವಾಮೀಜಿಯ ಖಾಸಗಿ ವಿಡಿಯೊಗಳನ್ನು ಹರಿಬಿಟ್ಟಿದ್ದಳು. ಒಟ್ಟಾರೆ ಬಂಡೆಮಠದ ಸ್ವಾಮೀಜಿ ಹತ್ಯೆ ಕೇಸ್​​​ನಲ್ಲಿ ತನಿಖೆಯಲ್ಲಿ ಹೊರಬಿದ್ದ ವಿಷಯಗಳನ್ನೆಲ್ಲ ಉಲ್ಲೇಖಿಸಿರುವ ಚಾರ್ಜ್​ಶೀಟ್​​ ಇಂದು ಕೋರ್ಟ್​ ಎದುರು ಸಲ್ಲಿಕೆಯಾಗಲಿದೆ.

ಇದನ್ನೂ ಓದಿ: Seer Suicide | ಬಂಡೇಮಠದ ಸ್ವಾಮೀಜಿಯ ಖಾಸಗಿ ವಿಡಿಯೊ ಮಾಡಿಕೊಂಡಿದ್ದ ಮೂಲ ಫೋನ್‌ಗಾಗಿ ಶೋಧ!

Exit mobile version