Site icon Vistara News

Karnataka CM: ಸಿದ್ದರಾಮಯ್ಯ ಸಿಎಂ ಆದ್ರೆ ರಾಜ್ಯದ ಸಮಗ್ರ ಅಭಿವೃದ್ಧಿ: ಬಸವರಾಜ ದೇವರು ಆಗ್ರಹ

basavaraja devaru demands karnataka cm post for siddramaiah

#image_title

ಧಾರವಾಡ: ರಾಜ್ಯದ ಸಮಗ್ರ ಅಭಿವೃದ್ಧಿ ಆಗಬೇಕೆಂದರೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ರೇವಣ ಸಿದ್ದೇಶ್ವರ ಮಠದ ಬಸವರಾಜ ದೇವರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕರ್ನಾಟಕ ರಾಜ್ಯದ ಸಮರ್ಥ ನಾಯಕ, ದುಡಿಯುವ ವರ್ಗದ ಕುರಿತು ಅತ್ಯಂತ ಕಾಳಜಿ ಮನುಷ್ಯ. ಅನೇಕ ಭಾಗ್ಯಗಳನ್ನು ಕೊಟ್ಟು ಆರ್ಥಿಕ ಪ್ರಗತಿಗೆ ತಮ್ಮದೆ ಆದ ಕೊಡುಗೆ ನೀಡಿದ ಸಿದ್ದರಾಮಯ್ಯ.

ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬ ಸಂಕಲ್ಪ ಇಡೀ ರಾಜ್ಯದ ಜನತೆಯಲ್ಲಿದೆ. ವಿಶೇಷವಾಗಿ ನಾವೆಲ್ಲರೂ ಅವರ ಪರವಾಗಿದ್ದೇವೆ. ರಾಜ್ಯದ ಜನತೆ ಅವರ ಪರವಾಗಿದೆ. ದುಡಿಯುವ ವರ್ಗಗಳು ಸಿದ್ದರಾಮಯ್ಯ ಅವರನ್ನು ಅತ್ಯಂತ ಪ್ರೀತಿಯಿಂದ ತಮ್ಮವರು ಎಂದುಕೊಂಡಿದ್ದಾರೆ.

ಅವರು ಕೊಟ್ಟ ಕೊಡುಗೆಗಳನ್ನು ಜನರು ಈಗಲೂ ನೆನೆಸುತ್ತಾರೆ. ಆ ದೃಷ್ಟಿಯಿಂದ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರ ನಾಯಕತ್ವ ಅವಶ್ಯಕ. ಅವರ ಪರವಾಗಿ ನಾವು ಒಲವನ್ನು ತೋರಿಸುತ್ತೇವೆ. ರಾಜ್ಯದ ಜನತೆ ಸಿದ್ದರಾಮಯ್ಯ ಅವರೇ ಸಿಎಂ ಅಂತ ಒಪ್ಪಿಕೊಂಡಿದ್ದಾರೆ.

ಹೋದಲ್ಲೆಲ್ಲ ಯಾವ ಮಂತ್ರಿ, ಮುಖ್ಯಮಂತ್ರಿಗೂ ಸೇರದಷ್ಟು ಜನ ಅವರಿಗೆ ಸೇರುತ್ತಿದ್ರು. ಅವರು ಅಷ್ಟೊಂದು ಜನಪ್ರಿಯ, ಜನರ ನಡುವೆ ಇರುವಂತ ನಾಯಕ. ಅವರ ನಾಯಕತ್ವ ರಾಜ್ಯಕ್ಕೆ ಬೇಕೇ ಬೇಕು. ಹೆದರಿಕೆ, ಬೆದರಿಕೆಯಾಗಲಿ ನಮ್ಮವರನ್ನು ಸಿಎಂ ಮಾಡಲೇ ಬೇಕು ಅಂತ ಹಠ ತೊಟ್ಟಿಲ್ಲ. ಹೈಕಮಾಂಡ್ ಮೇಲೆ ನಮಗೆ ವಿಶ್ವಾಸ ಇದೆ ಅವರನ್ನೇ ಸಿಎಂ ಮಾಡ್ತಾರೆ ಎಂದು ಬಸವರಾಜ ದೇವರು ಹೇಳಿದ್ದಾರೆ.

ಇದನ್ನೂ ಓದಿ: Karnataka Election Results: ಸಿದ್ದರಾಮಯ್ಯ ಪರ ಅಹಿಂದ ಸಂಘಟನೆಗಳ ಲಾಬಿ: ಮತ್ತೊಮ್ಮೆ ಸಿದ್ದರಾಮಯ್ಯ ಎಂದ ನಾಯಕರು

Exit mobile version