Site icon Vistara News

BBMP lorry | ಬಿಬಿಎಂಪಿ ಕಸದ ಲಾರಿ ಧಾವಂತಕ್ಕೆ ಬೈಕ್‌ ಸವಾರರಿಬ್ಬರು ಬಲಿ; ಇನ್ನೊಂದು ಲಾರಿಯಡಿಗೆ ಬಿದ್ದು ಪಾದಚಾರಿ ಸಾವು

Accident BBMP lorry

ದೊಡ್ಡಬಳ್ಳಾಪುರ: ಬಿಬಿಎಂಪಿಯ ಕಸದ ಲಾರಿಯ (BBMP lorry) ಅಬ್ಬರಕ್ಕೆ ಇಬ್ಬರು ರಸ್ತೆಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದ ಬಳಿ ಬೈಕ್‌ಗೆ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಎರಡು ತಿಂಗಳ ಹಿಂದೆಯೂ ಕಸದ ಲಾರಿ ಡಿಕ್ಕಿ ಹೊಡೆದು ಒಬ್ಬ ಯುವಕ ಮೃತಪಟ್ಟಿದ್ದರು.

ತ್ಯಾಜ್ಯ ತುಂಬಿಕೊಂಡು ಹೋಗುತ್ತಿದ್ದ ಲಾರಿ ಯಮವೇಗದಲ್ಲಿತ್ತು. ಆಗ ಅದು ಎದುರಿನಿಂದ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿಹೊಡೆದಿದೆ ಎಂದು ಹೇಳಲಾಗಿದೆ. ಅಪಘಾತದಿಂದಾಗಿ ಇಬ್ಬರು ಬೈಕ್‌ ಸವಾರರು ರಸ್ತೆ ಮೇಲೆ ಬಿದ್ದು ಹೊರಳಾಡುತ್ತಿದ್ದರೆ, ಲಾರಿ ಚಾಲಕ ವಾಹನ ಸಮೇತ ಪರಾರಿಯಾಗಲು ಯತ್ನ ನಡೆಸಿದ್ದ. ಆಗ ಕೂಡಲೇ ಸ್ಥಳೀಯರು ಸೇರಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಭಾಗದಲ್ಲಿ ಕಸದ ಲಾರಿಗಳ ಯಮ ವೇಗದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನೇಕಲ್‌ನಲ್ಲಿ ಪಾದಚಾರಿ ಮೇಲೆ ಹರಿದ ಲಾರಿ

ಪಾದಚಾರಿಯನ್ನು ಬಲಿ ಪಡೆದ ಲಾರಿಯನ್ನು ಠಾಣೆ ಮುಂದೆ ನಿಲ್ಲಿಸಿರುವುದು.

ಆನೇಕಲ್‌: ಇಲ್ಲಿನ ಮರಸೂರು ಬಳಿ ಲಾರಿ ಡಿಕ್ಕಿಯಾಗಿ ಬಿಹಾರ ಮೂಲದ ಯಾಸೀನ್(37) ಎಂಬವರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ದಾಟುತ್ತಿದ್ದ ಪಾದಚಾರಿ ಯಾಸೀನ್ ಅವರಿಗೆ ಅತಿ ವೇಗವಾಗಿ‌ ಬಂದ ಲಾರಿ ಡಿಕ್ಕಿ ಹೊಡೆದಿದೆ. ಹರಿಯಾಣ ರಾಜ್ಯದ ಪಾಸಿಂಗ್ ಹೊಂದಿರುವ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾದಚಾರಿಗೆ ಲಾರಿ ಗುದ್ದಿದ ಬಳಿಕ ಚಾಲಕ ವಾಹನವನ್ನು ನೇರವಾಗಿ ತಂದು ಪೊಲೀಸ್‌ ಠಾಣೆಗೆ ಶರಣಾಗಿದ್ದಾನೆ. ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version