Site icon Vistara News

Bear attack | ಕರಡಿ ದಾಳಿಗೆ ಶಿರಸಿಯಲ್ಲಿ ವ್ಯಕ್ತಿ ಬಲಿ; ಸ್ಥಳೀಯರಲ್ಲಿ ಆತಂಕ

beat attck

ಶಿರಸಿ: ಇಲ್ಲಿನ ದೇವನಳ್ಳಿ ವ್ಯಾಪ್ತಿಯ ಸರಗುಪ್ಪ ಅರಣ್ಯ ಪ್ರದೇಶದಲ್ಲಿ ಕರಡಿ ದಾಳಿಗೆ (Bear attack) ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಸುಂಡಳ್ಳಿ ಗ್ರಾಮದ ಓಂಕಾರ್ ಪದ್ಮಯ್ಯ ಗೌಡ (55) ಮೃತ ವ್ಯಕ್ತಿ.

ಓಂಕಾರ್‌ ಅವರು ಕಾಡಿನಲ್ಲಿ ಉಪ್ಪಂಗಿ ಹುಳಿಯನ್ನು ತರಲು ಹೋಗಿದರು ಎನ್ನಲಾಗಿದೆ. ಕಾಡಿಗೆ ಹೋದ ಓಂಕಾರ್‌ ಮನೆಗೆ ವಾಪಸ್‌ ಬಾರದೆ ಇದ್ದಾಗ ಕುಟುಂಬದವರು ಆತಂಕಗೊಂಡಿದ್ದಾರೆ. ಬಹಳ ಹೊತ್ತು ಕಾದರೂ ಅವರು ಬಾರದೇ ಇದ್ದರಿಂದ ಮನೆಯವರೆಲ್ಲ ಸೇರಿ ಕಾಡಿನಲ್ಲಿ ಹುಡುಕಿದ್ದಾರೆ. ಆತಂಕಕ್ಕೆ ಒಳಗಾದ ಕುಟುಂಬದವರು ಕಾಡಿನಲ್ಲಿ ಹುಡುಕಾಡಿದ್ದಾರೆ. ಜತೆಗೆ ಶಿರಸಿ ಗ್ರಾಮೀಣ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ.  

ಈ ವೇಳೆ ಕಾಡಿನಲ್ಲಿ ಹುಡುಕಿ ಹೋದವರಿಗೆ ಓಂಕಾರ್‌ ಮೇಲೆ ಕರಡಿ ದಾಳಿ ನಡೆಸಿ ಮೃತಪಟ್ಟಿರುವುದು ತಿಳಿದು ಬಂದಿದೆ. ಕರಡಿ ದಾಳಿಗೆ ಸ್ಥಳದಲ್ಲಿಯೇ ಓಂಕಾರ್‌ ಮೃತ ಪಟ್ಟಿದ್ದಾರೆ. ದೇವನಳ್ಳಿ ಭಾಗ ಕರಡಿ ದಾಳಿ ಹೆಚ್ಚಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Elephant Attack | ಕಾಡಾನೆ ದಾಳಿಗೆ ಸಕಲೇಶಪುರದಲ್ಲಿ ಮತ್ತೊಬ್ಬ ರೈತ ಬಲಿ!

Exit mobile version