Site icon Vistara News

Dowry Death: ವಿವಾಹಿತೆಯ ಜೀವಕ್ಕೆ ಮುಳುವಾಯ್ತು ಗಂಡನ ಮನೆಯವರ ವರದಕ್ಷಿಣೆ ದಾಹ

dowry death culprits in belagavi

ಬೆಳಗಾವಿ: ಬೆಳಗಾವಿಯಲ್ಲಿ ವರದಕ್ಷಿಣೆ ಪೀಡನೆ ನೀಡಿ ವಿವಾಹಿತೆಯೊಬ್ಬಳನ್ನು ಹತ್ಯೆ ಮಾಡಿರುವುದು (Dowry Death) ವರದಿಯಾಗಿದೆ. ವರದಕ್ಷಿಣೆಗಾಗಿ ಮಾವ, ಅತ್ತೆ ಹಾಗೂ ಗಂಡ, ಸೊಸೆಯನ್ನು ಉಸಿರುಗಟ್ಟಿಸಿ (murder case) ಕೊಂದಿದ್ದಾರೆ.

ಶ್ರೀದೇವಿ ದೀಪಕ ಬೇವಿನಕಟ್ಟಿ (31) ಮೃತ ದುರ್ದೈವಿ. ದೀಪಕ ಬೇವಿನಟ್ಟಿ (34) ಪದ್ಮಾವತಿ ಬೇವಿನಕಟ್ಟಿ (50) ರಾಮಚಂದ್ರ ಬೇವಿನಕಟ್ಟಿ (64) ಕೊಲೆ ಆರೋಪಿಗಳು. ಮದುವೆಯಾಗಿ 3 ವರ್ಷವಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಈ ವಿಚಾರಕ್ಕಾಗಿಯೂ ಪೀಡಿಸಲಾಗುತ್ತಿತ್ತು. ತವರು ಮನೆಯಿಂದ ಹಣ ತರಲು ಗಂಡ ಪೀಡಿಸುತ್ತಿದ್ದ.

ನಿರಂತರ ಪೀಡನೆಯ ಬಳಿಕ ಅತ್ತೆ, ಮಾವ ಹಾಗೂ ಗಂಡ ಸೇರಿಕೊಂಡು ಶ್ರೀದೇವಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ದ್ವಿಚಕ್ರ ವಾಹನಗಳ ಡಿಕ್ಕಿ, ಒಬ್ಬ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ದ್ವಿಚಕ್ರ ವಾಹನಗಳ ಡಿಕ್ಕಿಯಾಗಿ ಒಬ್ಬ ಸಾವನ್ನಪ್ಪಿದ್ದು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾನ್ಲೆ ಕ್ರಾಸ್‌ ಬಳಿ ಅಪಘಾತ ನಡೆದಿದೆ.

ಶಿರಸಿ ಕಸ್ತೂರಬಾ ನಗರ ನಿವಾಸಿ ಮಣಿ ಮೃತಪಟ್ಟ ಯುವಕ. ಮಂಜುನಾಥ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೊಬ್ಬ ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: Road Accident: ಅಣ್ಣನೊಂದಿಗೆ ಐಸ್‌ಕ್ರೀಮ್‌ ತರಲು ಹೋದ ಬಾಲಕ, ಟ್ರ್ಯಾಕ್ಟರ್‌ ಅಡಿ ಬಿದ್ದು ಸಾವು

Exit mobile version