Site icon Vistara News

ಈಜಲು ಹೋದ ಬಾಲಕ ಸಾವು: ಬದುಕಿ ಬರುತ್ತಾನೆ ಎಂಬ ನಂಬಿಕೆಯಲ್ಲಿ 4 ತಾಸು ಉಪ್ಪಿನಲ್ಲಿ ಮಲಗಿಸಿದ ಪೋಷಕರು

boy in salt

ಬಳ್ಳಾರಿ: ಈಜಲು ಹೋದ ಮಗು ನೀರಿನ ಹೊಂಡದಲ್ಲಿ ಬಿದ್ದು ಮೃತ ಪಟ್ಟಿದ್ದಾನೆ. ಉಪ್ಪಿನಲ್ಲಿ ಮಲಗಿಸಿದರೆ ಬದುಕುತ್ತಾರೆಂಬ ನಂಬಿಕೆಯಿಂದ ಪೋಷಕರು ನಾಲ್ಕು ತಾಸು ಮಗುವಿನ ಮೃತ ದೇಹವನ್ನು ಉಪ್ಪಿನಲ್ಲಿ ಮಲಗಿಸಿದ ಘಟನೆ ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕ ಸಿರವಾರ ಗ್ರಾಮದ ಸುರೇಶ್(10). ಈತನು ತಮ್ಮ ಸ್ನೇಹಿತರೊಂದಿಗೆ ನೀರಿನ ಹೊಂಡದಲ್ಲಿ ಈಜಲು ಹೋಗಿದ್ದಾನೆ. ಈಜು ಬಾರದ ಹಿನ್ನಲೆಯಲ್ಲಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ.

ಕೂಡಲೇ ಸ್ಥಳಕ್ಕೆ ದಾವಿಸಿದ ಪೋಷಕರು ಈ ರೀತಿ ಮೃತರಾದವರನ್ನು ಉಪ್ಪಿನಲ್ಲಿ ಮಲಗಿಸಿದರೆ ಬದುಕುತ್ತಾರೆಂದು ಸಾಮಾಜಿಕ ಜಾಲತಾಣದಲ್ಲಿ ಯಾರೋ ಓದಿದ್ದಾರಂತೆ, ಕೂಡಲೇ ನಾಲ್ಕೈದು ಚೀಲದಲ್ಲಿ ಉಪ್ಪು ತಂದು ಮೃತ ದೇಹವನ್ನು ಶಿರವನ್ನು ಬಿಟ್ಟಂತೆ ಉಪ್ಪಿನಲ್ಲಿ ಮಲಗಿಸಿದ್ದಾರೆ.

ನಾಲ್ಕು ತಾಸು ಉಪ್ಪಿನಲ್ಲಿ ಹೆಣವನ್ನು ಮಲಗಿಸಿದರೂ ಬದುಕದ ಹಿನ್ನಲೆಯಲ್ಲಿ ತಮ್ಮ ಮೌಢ್ಯತೆ ಅರಿತ ಪೋಷಕರು ದೇಹವನ್ನು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆದರೆ ವಿಷಯ ತಿಳಿಯದ ಕೆಲವರು, ವಾಸ್ತವತೆ ತಿಳಿಯದೆ, ಸಿರವಾರದಲ್ಲಿ ಮಗುವಿನ ಮೇಲೆ ಮೋಡಿ ನಡೆದಿದೆ ಎಂಬ ಅಪಪ್ರಚಾರಕ್ಕೂ ಕಾರಣವಾಗಿದೆ.
ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ, ಆದರೆ ಉಪ್ಪಿನಲ್ಲಿ ಮೃತ ದೇಹವನ್ನು ಮಲಗಿಸಿದ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ.

Exit mobile version