Site icon Vistara News

Forced Conversion : ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿದ್ದವರಿಗೆ ಬ್ರೈನ್‌ ವಾಶ್‌; ಮತಾಂತರಕ್ಕೆ ಯತ್ನಿಸಿದ ಇಬ್ಬರು ಅರೆಸ್ಟ್‌

Forced Conversion

ಬಳ್ಳಾರಿ: ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತರಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರ (Forced Conversion) ಆಗುವಂತೆ ಒತ್ತಾಯಿಸಲಾಗಿದೆ. ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಳ್ಳಾರಿಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಕಳೆದ ಜುಲೈ 18 ರಂದು ಘಟನೆ ನಡೆದಿದೆ.

ಯಾತ್ರಾತ್ರಿಗಳಿಬ್ಬರು ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿ ಮೂಲಕ ಮಂತ್ರಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ತೆಕ್ಕಲಕೋಟೆ ಪಟ್ಟಣದ ಹುಸೇನ್ ಭಾಷಾ (44) ಹಾಗೂ ಸಾಯಿ ಬಾಬಾ (24) ಎಂಬುವವರು ಮತಾಂತರಕ್ಕೆ ಯತ್ನಿಸಿದ್ದರು ಎಂಬ ಆರೋಪವಿದೆ.

ಕೇಸರಿ ಧ್ವಜ ಹಿಡಿದುಕೊಂಡು ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುತ್ತಿದ್ದ ಭಕ್ತರನ್ನು ನಿಲ್ಲಿಸಿ, ಕುರಾನ್ ಹಾಗೂ ಮುಸ್ಲಿಂ ಧರ್ಮ ಶ್ರೇಷ್ಠ ಎನ್ನುವಂತೆ ಹೇಳಿ ಮತಾಂತರಕ್ಕೆ ಯತ್ನಿಸಿದ್ದಾರೆ. ಸದ್ಯ ಗಾದಿಲಿಂಗಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತಾಂತರ ಮಾಡಲು ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ತೆಕ್ಕಲಕೋಟೆ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ತೆಕ್ಕಲಕೋಟೆ ಠಾಣೆಯಲ್ಲಿ ವಿಡಿಯೋ ದಾಖಲೆ ಆಧಾರದ ಮೇಲೆ ಮತಾಂತರ ಯತ್ನದ ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ ಯಾತ್ರಾತ್ರಿಗಳು ಯಾರೆಂದು ತಿಳಿದು ಬಂದಿಲ್ಲ.

ಇದನ್ನೂ ಓದಿ: Fraud Case : ಮಸಾಜ್‌ ಥೆರಪಿಸ್ಟ್‌ಗೆ ಬ್ಲ್ಯಾಕ್‌ಮೇಲ್‌ ಮಾಡಿ ಲಕ್ಷ ಲೂಟಿ ಮಾಡಿದ ನಕಲಿ ಪೊಲೀಸ್‌

ರಿಮಾಂಡ್‌ ಹೋಮ್‌ನಿಂದಲೇ ಮಧ್ಯರಾತ್ರಿ 17 ವರ್ಷದ ಬಾಲಕಿಯ ಅಪಹರಣ! ವಿಡಿಯೊದಲ್ಲಿ ಕೃತ್ಯ ಸೆರೆ

ಬಾಲಕಿಯರ ಅಪಹರಣ, ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ದಿನೇದಿನೇ ಹೆಚ್ಚಾಗುತ್ತಿದೆ. ಪ್ರತಿದಿನ ಒಂದಲ್ಲ ಒಂದು ಯುವತಿ ಅಥವಾ ಬಾಲಕಿ ಇಂತಹ ಪ್ರಕರಣಗಳಿಗೆ ಒಳಗಾಗುತ್ತಿದ್ದಾರೆ. ಇದೀಗ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಆಘಾತಕಾರಿ ಅಪಹರಣ ಘಟನೆಯೊಂದು ನಡೆದಿದ್ದು, 6 ಮುಸುಕುಧಾರಿಗಳು 17 ವರ್ಷದ ಬಾಲಕಿಯನ್ನು ಆಕೆಯನ್ನು ಇರಿಸಿದ್ದ ರಿಮಾಂಡ್‌ ಹೋಮ್‌ನಿಂದ ಮಧ್ಯರಾತ್ರಿಯ ವೇಳೆ ಅಪಹರಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಸಿಸಿಟಿವಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ (Girl Kidnapped) ಸೆರೆಯಾಗಿದೆ.

ಈ ಘಟನೆಯಲ್ಲಿ ಆಘಾತಕಾರಿ ವಿಚಾರವೇನೆಂದರೆ ಮಹಿಳಾ ಗಾರ್ಡ್, ಇತರ ಮೂವರು ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿ ಇರುವಾಗಲೇ ಇಡೀ ಅಪಹರಣವನ್ನು ಕೇವಲ 20 ನಿಮಿಷಗಳಲ್ಲಿ ನಡೆಸಲಾಗಿದೆ. ಈ ವೇಳೆ ಸಿಬ್ಬಂದಿ ಮಲಗಿದ್ದರು ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮುಸುಕುಧಾರಿಗಳು ಕ್ಯಾಂಪಸ್‍ನ ಹಿಂಭಾಗದಲ್ಲಿರುವ 4 ಅಡಿ ಎತ್ತರದ ಗೋಡೆಯನ್ನು ಜಿಗಿದು, ಕೋಲನ್ನು ಬಳಸಿ ಕಿಟಕಿಯ ಮೂಲಕ ಗಾರ್ಡ್ ರೂಮ್‌ನಿಂದ ಕೀಗಳನ್ನು ತೆಗೆದುಕೊಂಡು ಬಾಗಿಲು ತೆರೆದಿದ್ದಾರೆ. ಅಲ್ಲದೆ, ಅವರು ಹುಡುಗಿಯನ್ನು ಕರೆದು, ಅವಳನ್ನು ಎಬ್ಬಿಸಿ ನಂತರ ತಮ್ಮೊಂದಿಗೆ ಕರೆದೊಯ್ದರು. ಇಡೀ ಭದ್ರತಾ ವ್ಯವಸ್ಥೆಗೆ ತಿಳಿಯದಂತೆ ಈ ಕೃತ್ಯ ಎಸಗಲಾಗಿದೆ.

ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೊದಲ್ಲಿ, ಹುಡುಗಿ ಹೊರಗೆ ಹೋಗುವಾಗ ಮುಖವಾಡ ಧರಿಸಿದ ಪುರುಷರಲ್ಲಿ ಒಬ್ಬರೊಂದಿಗೆ ಕೈ ಹಿಡಿದಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಕರ್ತವ್ಯದಲ್ಲಿದ್ದ ಮಹಿಳಾ ಗಾರ್ಡ್ ನಿದ್ರೆಯಲ್ಲಿದ್ದರು. ಮುಖ್ಯ ದ್ವಾರದಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಒಟ್ಟು ಮೂವರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು, ಆದರೆ ಒಳಗೆ ನಡೆಯುತ್ತಿರುವ ಘಟನೆಯ ಬಗ್ಗೆ ಇವರಿಗೆ ಗೊತ್ತೇ ಆಗಲಿಲ್ಲ.

ಹಾಗೇ ಈ ಘಟನೆಯಲ್ಲಿ ಹುಡುಗಿಯ ಗೆಳೆಯ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪಹರಣಕಾರರಿಗೆ ಸ್ಥಳದ ಬಗ್ಗೆ ಪ್ರತಿಯೊಂದು ವಿವರವೂ ತಿಳಿದಿರುವಂತೆ ತೋರಿದ್ದರಿಂದ ಇಡೀ ಘಟನೆಯನ್ನು ಪ್ಲ್ಯಾನ್ ಮಾಡಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಈ ಹಿಂದೆ ಎರಡು ಬಾರಿ ಓಡಿಹೋಗಲು ಪ್ರಯತ್ನಿಸಿದ್ದಳು. ಆಕೆ ಈ ಹಿಂದೆ, ತಾಟಿಪುರ ಪ್ರದೇಶದಿಂದ ಕಾಣೆಯಾಗಿದ್ದಳು ಮತ್ತು ಈ ಬಗ್ಗೆ ಅವಳ ಗೆಳೆಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.

ನಂತರ ಬಾಲಕಿಯನ್ನು ಪೊಲೀಸರು ಹುಡುಕಿ ಜೂನ್ 7 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅವಳು ತನ್ನ ಹೆತ್ತವರೊಂದಿಗೆ ಹೋಗಲು ನಿರಾಕರಿಸಿದಕ್ಕೆ, ನಂತರ ನ್ಯಾಯಾಲಯವು ಅವಳನ್ನು ಬಾಲಕಿಯರ ಆಶ್ರಮಕ್ಕೆ ಕಳುಹಿಸಿತ್ತು. ಅವಳು ಈ ಹಿಂದೆ ಮನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು. ಆದ್ದರಿಂದ ಅವಳನ್ನು ಮನೆಯವರು ಕೋಣೆಯಲ್ಲಿ ಕೂಡಿಹಾಕಿದ್ದರು ಎಂಬುದಾಗಿ ತಿಳಿದುಬಂದಿದೆ. ಈಗ, ಬಾಲಕಿಯ ಆಶ್ರಮದಲ್ಲಿ ಯಾರಾದರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version