Site icon Vistara News

Accident News: ಅಜಾಗರೂಕ ಚಾಲನೆ, ಸ್ಕೂಟರ್‌ ಸವಾರನ ಪ್ರಾಣ ತೆಗೆದ ಕಾರು ಚಾಲಕಿ

dasarahalli accident

ಬೆಂಗಳೂರು: ಜ್ಞಾನಭಾರತಿ ಹಿಟ್‌ ಆಂಡ್‌ ರನ್ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಸ್ಕೂಟರ್‌ ಸವಾರನ ಪ್ರಾಣವನ್ನೇ ಒಬ್ಬಾಕೆ ತೆಗೆದಿದ್ದಾಳೆ.

ದುರ್ಘಟನೆಯಲ್ಲಿ, ತಂದೆಯನ್ನು ನೋಡಲು ಹೋದ ಮಗನೇ ಶವವಾಗಿದ್ದಾರೆ. ಅವರ ಜತೆಗಿದ್ದ ಅವರ ಪುತ್ರನೂ ತೀವ್ರವಾಗಿ ಗಾಯಗೊಂಡಿದ್ದು ಸರ್ಜರಿಗೆ ಒಳಗಾಗಿದ್ದಾನೆ.

ಟಿ.ದಾಸರಹಳ್ಳಿಯಲ್ಲಿ ಈ ಭೀಕರ ಅಪಘಾತ ನಡೆದಿದೆ. ಸಂಜಯ್‌ ಬಾಬು ಎಂಬವರು ತಮ್ಮ ತಂದೆಯನ್ನು ನೋಡಲು ಮಗ ವೇದಾಂತ್‌ ಜತೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಶುಭಾ ಎಂಬವರು ಚಲಾಯಿಸುತ್ತಿದ್ದ ವ್ಯಾಗನಾರ್ ಕಾರ್ ಡಿಕ್ಕಿಯಾದ ಪರಿಣಾಮ ತಂದೆ ಮಗ ಕೆಳಗೆ ಬಿದ್ದು ಗಾಯಗೊಂಡರು. ತಂದೆ ಮಗನನ್ನು ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದ್ದು, ಹಲವಾರು ಶಸ್ತ್ರಚಿಕಿತ್ಸೆಗಳ ಬಳಿಕವೂ ಚಿಕಿತ್ಸೆ ಫಲಕಾರಿಯಾಗದೆ ಸಂಜಯ್ ಬಾಬು ನಿಧನರಾಗಿದ್ದಾರೆ.

ಮಹಿಳೆ ಕಾರನ್ನು ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಮಗ ವೇದಾಂತ್‌ಗೂ ಬಲಭಾಗದ ಕೈಯ 4 ರಿಬ್ಸ್ ಮುರಿದಿದ್ದು, ಎಡಗೈ ಭುಜದ ಮೂಳೆ ಮುರಿದಿದೆ. ಆತನಿಗೂ ಶಸ್ತ್ರಚಿಕಿತ್ಸೆ ಅವಶ್ಯಕವೆಂದು ವೈದ್ಯರು ತಿಳಿಸಿದ್ದಾರೆ. ಕಾರಿನ ಮಾಲಕಿ ಶುಭ ಅವರನ್ನು ಪೀಣ್ಯ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Accident news: ಬೆಳಗ್ಗೆ ಮೋದಿ ಕಾರ್ಯಕ್ರಮಕ್ಕೆ ಹೋದ ವಿದ್ಯಾರ್ಥಿಗಳು ಸಂಜೆ ಅಪಘಾತದಲ್ಲಿ ಸಾವು

Exit mobile version