Site icon Vistara News

Assault Case: ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರನ ವಿರುದ್ಧ ಜಾತಿ ನಿಂದನೆ ದೂರು

Assault Case

ಬೆಂಗಳೂರು: ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ ಕಟ್ಟಾ ಜಗದೀಶ್ ಹಾಗೂ ಅವರ ಸ್ನೇಹಿತರ ವಿರುದ್ಧ ಹಲ್ಲೆ ಹಾಗೂ ಜಾತಿನಿಂದನೆಯಡಿ ಕೇಸ್ ದಾಖಲಾಗಿದೆ.

ಸಂತೋಷ್ ಎಂಬಾತ ನೀಡಿರುವ ದೂರಿನನ್ವಯ ಸಂಜಯನಗರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಸಂಜಯನಗರದ ನಾಗಶೆಟ್ಟಿಹಳ್ಳಿಯಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಹೆಬ್ಬಾಳ ಶಾಸಕ ಭೈರತಿ ಸುರೇಶ್ ಭಾವಚಿತ್ರದ ಬ್ಯಾನರ್ ಹಾಕ್ತಿದ್ದ ದೂರುದಾರ ಸಂತೋಷ್. ಈ ವೇಳೆ ಫಾರ್ಚೂನರ್ ಹಾಗೂ ಇನೋವಾ ಕಾರಲ್ಲಿ ಸ್ಥಳಕ್ಕೆ ಬಂದಿರುವ ಕಟ್ಟಾ ಜಗದೀಶ್ ಮತ್ತು ಸ್ನೇಹಿತರು ಭೈರತಿ ಸುರೇಶ್ ಬ್ಯಾನರ್ ಕಟ್ಟುವುದನ್ನು ಪ್ರಶ್ನಿಸಿ ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ್ದಾರೆ ಎಂದು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version