Site icon Vistara News

Assault Case: ಕಾರು ಖರೀದಿಯಲ್ಲಿ ವಂಚನೆ, ದೂರುದಾರನ ಮೇಲೆ ಆರೋಪಿಯ ಹಲ್ಲೆ

assault

ಬೆಂಗಳೂರು: ಕಾರು ಖರೀದಿ ವಿಚಾರದಲ್ಲಿ ವಂಚನೆ ಮಾಡಿದ ಆರೋಪಿಯೇ ಜೈಲಿನಿಂದ ಬಿಡಿಸಿಕೊಂಡು ಬಂದು, ದೂರುದಾರನನ್ನು ಅಟ್ಟಿಸಿಕೊಂಡು ಬಂದು ಹಲ್ಲೆ ಮಾಡಿದ (Assault Case) ಘಟನೆ ನಡೆದಿದೆ. ಮಿನಿಕೂಪರ್ ಮಾಲೀಕನ ಮೇಲೆ, ಆಡಿ ಕಾರ್‌ನಲ್ಲಿ ಬಂದ ತಂಡ ಹಲ್ಲೆ ಮಾಡಿದೆ.

ಅಖಿಲ್@ ಹೇಮಾದ್ರಿ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ರೋನಿತ್, ದುರ್ಗಾ ಸೇರಿದಂತೆ ಐದು ಜನರಿಂದ ಹಲ್ಲೆ ನಡೆದಿದೆ. ರೋನಿತ್ ಕಾರು ಬಿಸಿನೆಸ್ ವಿಚಾರದಲ್ಲಿ ವಂಚನೆ ಮಾಡಿದ್ದಾನೆ ಎಂದು ಆತನ ಮೇಲೆ ಅಖಿಲ್‌ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಈ ಹಿನ್ನೆಲೆಯಲ್ಲಿ ಬಂಧಿತನಾಗಿದ್ದ ರೋನಿತ್, ನಂತರ ಜಾಮೀನು ಪಡೆದು ಹೊರಬಂದಿದ್ದ.

ದೂರು ನೀಡಿದ ಹಿನ್ನೆಲೆಯಲ್ಲಿ ಪದೇ ಪದೆ ಅಖಿಲ್‌ಗೆ ಬೆದರಿಕೆ ಹಾಕುತ್ತಿದ್ದ ರೋನಿತ್‌, ಇದೇ ದ್ವೇಷದಿಂದ ಸಮಯಕ್ಕಾಗಿ ಕಾಯುತ್ತಿದ್ದನೆನ್ನಲಾಗಿದೆ. ಅಖಿಲ್‌ ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ ರೋನಿತ್ ಆ್ಯಂಡ್ ಟೀಂ ಆಡಿ ಕಾರಿನಲ್ಲಿ ಫಾಲೋ ಮಾಡಿಕೊಂಡು ಬಂದಿದೆ. ಎಲ್ ಆ್ಯಂಡ್ ಟಿ ಅಪಾರ್ಟ್ಮೆಂಟ್ ಬಳಿ ಬರುತ್ತಿದ್ದಂತೆ ರೋನಿತ್ ಟೀಂ ಅಡ್ಡ ಹಾಕಿದ್ದು, ಅಖಿಲ್‌ ಕಾರಿನಲ್ಲಿರುವಾಗಲೆ ಹಲ್ಲೆ ನಡೆಸಿ ಕಾರಿನ ಗ್ಲಾಸ್ ಒಡೆದು ಹಾಕಿದೆ. ನಂತರ ಕೊಲೆ ಬೆದರಿಕೆ ಹಾಕಿದೆ. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Air Travel: ವಿಮಾನದಲ್ಲಿ ಸಿಗರೇಟ್‌ ಸೇದಿ ಅರೆಸ್ಟ್‌ ಆದ ಪ್ರಯಾಣಿಕ

Exit mobile version