Site icon Vistara News

ಬೈಕ್‌ ಸವಾರರ ಮೇಲೆ ಹರಿದ ಲಾರಿ, ಇಬ್ಬರು ಸಾವು

accident death

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಡರಾತ್ರಿ 12 ಗಂಟೆ ಸಮಯದಲ್ಲಿ ಅಪಘಾತವಾಗಿದೆ. ವೇಗವಾಗಿ ಬಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರರಿಬ್ಬರು ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ. ಮೃತಪಟ್ಟವರನ್ನು ರವಿ (22) ಹಾಗು ಆತನ ಸ್ನೇಹಿತ ವಿಕಾಸ್(20) ಎಂದು ಗುರುತಿಸಲಾಗಿದೆ.

ಚನ್ನಂಪಲ್ಲಿ ಗ್ರಾಮದ ವಿಕಾಸ್ ಹಾಗೂ ರವಿ ಮಂಡ್ಯ ಮೂಲದವರಾಗಿದ್ದು, ಸುಂಕದಕಟ್ಟೆ ರಸ್ತೆಯ ಟ್ರೂ ವ್ಯಾಲ್ಯೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಡ್ಯೂಟಿ ಮುಗಿಸಿ ಕಂಪನಿ ಯೂನಿಫಾರಂ ತರಲು ಟೈಲರ್ ಶಾಪ್‌ಗೆ ಹೋಗಿದ್ದ ಇವರು ಬ್ಯಾಡರಹಳ್ಳಿ ಬಳಿಯಲ್ಲಿರುವ ಟೈಲರ್ ಶಾಪ್‌ಗೆ ಹೋಗಿ ವಾಪಸ್ಸಾಗುವ ವೇಳೆ ಅಪಘಾತ ಸಂಭವಿಸಿದೆ.

ಯುವಕರು 220 ಪಲ್ಸರ್ ಬೈಕ್‌ನಲ್ಲಿ ಹೋಗುತ್ತಿದ್ದು, ಈ ವೇಳೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಯುವಕರು ಕೆಳಗೆ ಬಿದ್ದಿದ್ದು, ಅವರ ಮೇಲೆ ಲಾರಿ ಹರಿದಿದೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Nepal Plane Crash | ಮಗ ಹುಟ್ಟಿದನೆಂದು ಪಶುಪತಿನಾಥನಿಗೆ ಹರಕೆ ತೀರಿಸಲು ಹೋಗಿದ್ದವನು ವಿಮಾನ ಅಪಘಾತಕ್ಕೆ ಬಲಿ

Exit mobile version