Site icon Vistara News

ಬಿಎಂಟಿಸಿ ಬಸ್‌ನಲ್ಲಿ ಪತ್ತೆಯಾದ ಬಾಲಕ ಪೋಷಕರ ಮಡಿಲಿಗೆ

boy

ಬೆಂಗಳೂರು: ಬೆಂಗಳೂರಿನ ಬಿಎಂಟಿಸಿ ಬಸ್‌ನಲ್ಲಿ ಒಬ್ಬನೇ ಪತ್ತೆಯಾಗಿದ್ದ ಬಾಲಕನ ಪೋಷಕರನ್ನು ಪತ್ತೆ ಹಚ್ಚಿ ಆತನನ್ನು ಅವರಿಗೆ ಒಪ್ಪಿಸಲಾಗಿದೆ.

ಬೆಂಗಳೂರಿನ ಪೀಣ್ಯದ ನಿವಾಸಿ ದೇವರಾಜ್ ಎಂಬವರ ಪುತ್ರನೀತ. ಗೆಳೆಯರೊಂದಿಗೆ ಕಣ್ಣಾಮುಚ್ಚಾಲೆ ಆಡುವಾಗ ಅಲ್ಲೇ ನಿಂತಿದ್ದ ಬಸ್ಸನ್ನು ಈತ ಹತ್ತಿದ್ದ. ಕಂಡಕ್ಟರ್ ಕೇಳಿದಾಗ 5 ರೂಪಾಯಿ ಕೊಟ್ಟು ಟಿಕೆಟ್ ಪಡೆದಿದ್ದ. ನಂತರ ಬಸ್ಸಿನ ಕಂಡಕ್ಟರ್‌ ಹಾಗೂ ಡ್ರೈವರ್‌ ಅನುಮಾನ ಬಂದು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಲಕನ ಮಾಹಿತಿ ತಿಳಿಸಲು ಮಲ್ಲೇಶ್ವರಂ ಪೊಲೀಸರು ಕೋರಿದ್ದರು.

ಮೂಲತಃ ಹಾನಗಲ್ ತಾಲೂಕಿನ ಕೀರವಾಡಿಯ ದೇವರಾಜ್ ಅವರ ಪುತ್ರನಾಗಿದ್ದು, ಪೋಷಕರು ಪೀಣ್ಯದಲ್ಲಿ ಗಾರ್ಮೆಂಟ್ಸ್ ಉದ್ಯೋಗಿಗಳು. ಮಗ ನಾಪತ್ತೆಯಾಗಿದ್ದಾನೆ ಎಂದು ಪೀಣ್ಯ ಪೊಲೀಸರನ್ನು ಸಂಪರ್ಕಿಸಿದ್ದ ತಂದೆಗೆ ಪೊಲೀಸರು ಮಗನ ಮಾಹಿತಿ ನೀಡಿದ್ದರು.

ಇದನ್ನೂ ಓದಿ | ಗೃಹಿಣಿ ನಿಹಾರಿಕಾ ಅನುಮಾನಾಸ್ಪದ ಸಾವು; ಪತಿಯೇ ಕೊಲೆ ಮಾಡಿದ್ದಾಗಿ ಪಾಲಕರ ದೂರು

Exit mobile version