Site icon Vistara News

ಪ್ರೇಯಸಿಯ ಮಾಜಿ ಲವ್ವರ್‌ನಿಂದ ಹಾಲಿ ಲವ್ವರ್ ಕೊಲೆ‌

ಬೆಂಗಳೂರು: ಪ್ರೇಯಸಿಯ ಮಾಜಿ ಪ್ರಿಯತಮ ತನ್ನನ್ನು ಬಿಟ್ಟು ಬೇರೊಬ್ಬನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ ಆಕೆಯ ಹಾಲಿ ಪ್ರಿಯತಮನನ್ನು ಕೊಲೆ ಮಾಡಿದ ಪ್ರಕರಣ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ದಾಖಲಾಗಿದೆ. ಕೊಲೆಯಾದ ಯುವಕನನ್ನು ಸಮರ್ಥ್‌ ನಾಯರ್‌ ಎಂದು ಗುರುತಿಸಲಾಗಿದೆ.
ಸಮರ್ಥ್‌ ನಾಯರ್‌ ಮೂಲತಃ ಶಿವಮೊಗ್ಗದವರಾಗಿದ್ದು, ಭದ್ರಾವತಿ ಮೂಲದ ಯುವತಿಯಯನ್ನು ಪ್ರೀತಿಸಿದ್ದ. ಆದರೆ ಆ ಯುವತಿ ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯೊಂದರಲ್ಲಿ ಕಿರಣ್‌ ಎಂಬಾತನನ್ನು ಪ್ರೀತಿಸಿದ್ದರು. ಕೆಲ ಸಮಯಗಳ ಕಾಲ ಇಬ್ಬರೂ ಒಬ್ಬರೊನ್ನಬ್ಬರು ಪ್ರೀತಿಸಿದ್ದು, ನಂತರ ಅನೇಕ ಕಾರಣಗಳಿಗೆ ಜಗಳವಾಗಿತ್ತು. ಕೊನೆಗೆ ಅವರಿಬ್ಬರ ನಡುವಿನ ಸಂಬಂಧ ಅಂತ್ಯಗೊಂಡಿತ್ತು. ಇಬ್ಬರೂ ಬ್ರೇಕ್‌ಅಪ್‌ ಮಾಡಿಕೊಂಡಿದ್ದರು.

ಇದನ್ನೂ ಓದಿ: ಪ್ರೇಯಸಿಗಾಗಿ ಜೈಲು ಸೇರಿದ ಭೂಪ: ಆರೋಪಿಯ‌ ರಾಜಸ್ಥಾನ ʻಚೈನ್‌ʼ ಲಿಂಕ್‌ ನೋಡಿ ಪೊಲೀಸರಿಗೇ ಶಾಕ್!

ಬ್ರೇಕ್‌ಅಪ್ ಆದ ಬಳಿಕ ಆ ಯುವತಿ ಸಮರ್ಥ್ ಎಂಬ ಯುವಕನನ್ನು ಪ್ರೀತಿಸಿದರು. ಈ ವಿಷಯದಿಂದ ಕೋಪಗೊಂಡ ಕಿರಣ್‌ ಸಮರ್ಥ್‌ನ್ನು ಹತ್ಯೆ ಮಾಡಲು ಮುಂದಾಗಿದ್ದ. ಸಮರ್ಥ್ ಹಾಗೂ ಪ್ರೇಯಸಿ ಇಬ್ಬರೂ ಜತೆಯಿದ್ದ ಸಮಯದಲ್ಲಿ ಕಿರಣ್‌ ತನ್ನ ಸ್ನೇಹಿತರಾದ ಅರುಣ್‌ ಮತ್ತು ರಾಕೇಶ್‌ ಜತೆ ಆಗಮಿಸಿದ್ದರು.

ಕಿರಣ್‌ ಹಾಗೂ ಸ್ನೇಹಿತರು ಏಕಾಎಕಿ ಸಮರ್ಥ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಸಮರ್ಥ್ ಅವರ ತಲೆಯನ್ನು ಗೋಡೆಗೆ ಜಚ್ಚುವ ಮೂಲಕ ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯ ಬಳಿಕ ಕೂಡಲೇ ಸಮರ್ಥ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದಿರುವ ಕಾರಣದಿಂದ ಸಮರ್ಥ್‌ ಮೃತರಾದರು.

ತನಿಖೆ ಆರಂಭಿಸಿದ ಬೊಮ್ಮನಹಳ್ಳಿ ಪೊಲೀಸರು ಸದ್ಯ ಈ ಪ್ರಕರಣದ ಮೂವರು ಆರೋಪಿಗಳಾದ ಕಿರಣ್‌, ಅರುಣ್‌ ಹಾಗೂ ರಾಕೇಶ್‌ ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಪುಟಿನ್‌ ಪ್ರೇಯಸಿಯ ಮೇಲೆ ಮುಗಿಬಿದ್ದ ಯುರೋಪ್!‌ ಯಾರೀಕೆ ಕಬಯೇವಾ?

Exit mobile version