Site icon Vistara News

Crime news | ಕರ್ತವ್ಯನಿರತ ಸರ್ಕಲ್ ಇನ್‌ಸ್ಪೆಕ್ಟರ್ ಕತ್ತಿನ ಪಟ್ಟಿ ಹಿಡಿದ ಮಾಜಿ ಕಾರ್ಪೋರೇಟರ್ ಪೊಲೀಸ್‌ ವಶಕ್ಕೆ

Crime news

ಬೆಂಗಳೂರು: ಕರ್ತವ್ಯನಿರತ ಸರ್ಕಲ್‌ ಇನ್‌ಸ್ಪೆಕ್ಟರ್‌ ಅವರ ಕತ್ತಿನ ಪಟ್ಟಿ ಹಿಡಿದುದಕ್ಕಾಗಿ ಕಗ್ಗಲೀಪುರ ಪೊಲೀಸರು ಮಾಜಿ ಕಾರ್ಪೋರೇಟರ್ ವಿ.ಬಾಲಕೃಷ್ಣ ಎಂಬವರನ್ನು ಬಂಧಿಸಿದ್ದಾರೆ.

ಯಲಚೇನಹಳ್ಳಿ, ವಾರ್ಡ್ ನಂಬರ್ 185ರ ಮಾಜಿ ಕಾರ್ಪೋರೇಟರ್ ಆಗಿರುವ ಬಾಲಕೃಷ್ಣ, ಜಮೀನು ವ್ಯಾಜ್ಯ ವಿಚಾರವಾಗಿ ಮಾತನಾಡಲು ನಿನ್ನೆ ಸಂಜೆ ಕಗ್ಗಲೀಪುರ ಠಾಣೆಗೆ ತೆರಳಿದ್ದರು. ಈ ವೇಳೆ ಸರ್ಕಲ್ ಇನ್‌ಸ್ಪೆಕ್ಟರ್ ವಿಜಯ ಕುಮಾರ್ ಜೊತೆಗೆ ಮಾತಿನ ಚಕಮಕಿ ನಡೆದಿದ್ದು, ಕೊನೆಗೆ ವಿಜಯ್ ಕುಮಾರ್ ಅವರ ಕತ್ತಿನ ಪಟ್ಟಿ ಹಿಡಿದು ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ.

ವಿಜಯ್ ಕುಮಾರ್ ದೂರು ಆಧರಿಸಿ IPC section 353 (ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ) ಹಾಗೂ IPC section 332 (ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು) ಅಡಿ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಬಾಲಕೃಷ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದ್ದು, ಇಂದು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ | Assault | ಪೈಲ್ಸ್‌ಗೆ ಚಿಕಿತ್ಸೆ ಕೊಡುತ್ತೇನೆ ಎಂದು ವಂಚಿಸಿದವನಿಗೆ ಹಿಂಭಾಗದಲ್ಲಿ ರಕ್ತ ಸೋರುವಂತೆ ಹಲ್ಲೆ!

Exit mobile version