Site icon Vistara News

Crime news | ಮದುವೆ ಆಗುತ್ತೇನೆಂದು ನಂಬಿಸಿ ವಿಧವೆಯ ಚಿನ್ನಾಭರಣ ಕದ್ದು ಪರಾರಿ!

love fraud

ಬೆಂಗಳೂರು: ಮದುವೆಯಾಗುತ್ತೇನೆ ಎಂದು ನಂಬಿಸಿದ ವಂಚಕನೊಬ್ಬ ಆಕೆಯ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ. ಮೋಸ ಹೋದ ಪ್ರಿಯತಮೆ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿರುವ ಘಟನೆಯಿದು. ಪ್ರದೀಪ್ ಎಂಬಾತನಿಂದ ಪ್ರಿಯತಮೆ ಮಹಿಳೆಯ ಮನೆಯಲ್ಲಿ ಕಳ್ಳತನ ನಡೆದಿದೆ. ಮಹಿಳೆಯ ಪತಿ ತೀರಿಹೋಗಿದ್ದು, ಹೆಣ್ಣು ಮಗು ಜೊತೆಗೆ ವಾಸವಿದ್ದಾರೆ. ಅವರನ್ನು ಪರಿಚಯ ಮಾಡಿಕೊಂಡು ಮನೆ ಸೇರಿಕೊಂಡ ವಿವಾಹಿತ ಪ್ರದೀಪ್, ನನಗೆ ಮದುವೆ ಆಗಿಲ್ಲ, ನಿನ್ನನ್ನೇ ಮದುವೆಯಾಗುವೆ ಎಂದು ಬಣ್ಣದ ಮಾತುಗಳಿಂದ ಮರುಳು ಮಾಡಿ ಪ್ರೀತಿಸುವೆ ಆಕೆಯ ಮನೆಯಲ್ಲೇ ಉಳಿದುಕೊಂಡಿದ್ದ. ನಂತರ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾನೆ.

ನೊಂದ ಮಹಿಳೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಪ್ರದೀಪ್‌ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Crime News | ಅಕ್ರಮವಾಗಿ ಎಟಿಎಂ ಕಾರ್ಡ್‌ ಪಡೆದು, ಕಾವೇರಿ ಎಂಪೋರಿಯಮ್‌ ನಿವೃತ್ತ ಸಿಬ್ಬಂದಿಗೆ 6 ಲಕ್ಷ ರೂ. ವಂಚನೆ

Exit mobile version