Site icon Vistara News

Crime news | ಚಾಕುವಿನಿಂದ ಇರಿದು ಯುವಕನ ಕೊಲೆ

salman murder

ಬೆಂಗಳೂರು: ಮಂಗಳವಾರ ರಾತ್ರಿ 10.30ರ ಹೊತ್ತಿಗೆ ಹೆಗ್ಗಡೆನಗರ ಸರ್ಕಲ್ ಸಮೀಪ ಯುವಕನೊಬ್ಬನನ್ನು ಇರಿದು ಕೊಲೆ ಮಾಡಲಾಗಿದೆ. ಹಳೆ ದ್ವೇಷ ಇದಕ್ಕೆ ಕಾರಣ ಎನ್ನಲಾಗಿದೆ.

ಹೆಗ್ಗಡೆನಗರ ನಿವಾಸಿ ಸಲ್ಮಾನ್ (20) ಕೊಲೆಯಾದ ಯುವಕ. ತಂದೆ ಕಾರ್ಪೆಂಟರ್ ಶಾಪ್ ನಡೆಸುತ್ತಿದ್ದು, ತಾಯಿ ಹೊಟೇಲ್ ನಡೆಸುತಿದ್ದರು. ತಂದೆ ತಾಯಿಯ ಕೆಲಸಕ್ಕೆ ಸಹಾಯ ಮಾಡುತ್ತಿದ್ದ ಈತ ಸಂಜೆ ಮನೆಯಿಂದ ಕೆಲಸದ ನಿಮಿತ್ತ ಹೊರ ಬಂದಿದ್ದು, ರಾತ್ರಿ 10.30 ಸುಮಾರಿಗೆ ಹೆಗ್ಗಡೆನಗರ ಸರ್ಕಲ್ ಬಳಿ ಬೈಕಿನಲ್ಲಿ ಹೋಗುತ್ತಿದ್ದಾಗ ಬೈಕ್‌ಗಳಲ್ಲಿ ಬಂದ ಮೂರ್ನಾಲ್ಕು ಮಂದಿ ಸಲ್ಮಾನ್ ಮೇಲೆ ಹಲ್ಲೆ ಮಾಡಿ ಹೊಟ್ಟೆಗೆ ಬಲವಾಗಿ ಇರಿದು ಪರಾರಿಯಾಗಿದ್ದಾರೆ. ಸಲ್ಮಾನ್ ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರೂ ಫಲಕಾರಿಯಾಗಿಲ್ಲ.

ಸ್ನೇಹಿತರ ನಡುವೆ ಕೆಲವು ದಿನಗಳ ಹಿಂದೆ ನಡೆದಿದ್ದ ಜಗಳವೇ ಹಲ್ಲೆಗೆ ಕಾರಣ ಎಂದು ತಿಳಿದುಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಂಪಿಗೇಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಹಂತಕರ ಬಂಧನಕ್ಕೆ ಶೋಧ ಮುಂದುವರೆಸಿದ್ದಾರೆ.

ಇದನ್ನೂ ಓದಿ | Student murder | ವಿದ್ಯಾರ್ಥಿಯನ್ನು ಕೊಂದ ರಕ್ಕಸ ಶಿಕ್ಷಕ ಅರೆಸ್ಟ್‌: ಬಾಲಕನ ತಾಯಿ ಮೇಲಿನ ರೋಷವೇ ಕೊಲೆಗೆ ಕಾರಣ

Exit mobile version