Site icon Vistara News

Rowdy Sheeter: ಚುನಾವಣೆ ಹಿನ್ನೆಲೆ, ರೌಡಿ ನಾಗ 6 ಜಿಲ್ಲೆಗಳಿಂದ ಗಡಿಪಾರು

wilson garden Naga

ಬೆಂಗಳೂರು​: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆಕ್ಟಿವ್​ ಆಗಿದ್ದ ನಟೋರಿಯಸ್​ ರೌಡಿ ನಾಗರಾಜ್​@ ವಿಲ್ಸನ್​ ಗಾರ್ಡನ್​ ನಾಗನನ್ನು ಗಡಿಪಾರು ಮಾಡಲಾಗಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಂದ ಈತನನ್ನು ಗಡಿಪಾರು ಮಾಡಲಾಗಿದೆ. ಆರು ತಿಂಗಳವರೆಗೂ ಕೂಡ ವಿಲ್ಸನ್​ ಗಾರ್ಡನ್​ ನಾಗ ನಗರಕ್ಕೆ ಬರುವಂತಿಲ್ಲ. ಯಾವುದೇ ಆಕ್ಟಿವಿಟಿಗಳಲ್ಲಿ ತೊಡಗುವಂತಿಲ್ಲ. ಈಗಾಗಲೆ ಸೆಕ್ಷನ್​ 110ರಡಿ ಬಾಂಡ್​ ಬರೆಸಿಕೊಂಡು ವಾರ್ನಿಂಗ್​ ಕೂಡ ಮಾಡಲಾಗಿದೆ.

ಸದ್ಯ ಈತನೊಬ್ಬನಿಗೇ ಅಲ್ಲ, ನಗರದಲ್ಲಿ ಆಕ್ಟೀವ್​ ಆಗಿರುವ ಇನ್ನಿತರ ಹಲವು ರೌಡಿಗಳಿಗೂ ಸಿಸಿಬಿ ಹಾಗು ನಗರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಮಾಗಡಿ ರೋಡ್​ ಪೊಲೀಸ್​ ಠಾಣೆಯಲ್ಲಿ ಗಡಿಪಾರಿನ ಪ್ರೊಸೀಜರ್​ ಮುಗಿಸಿ, ಆರು ತಿಂಗಳು ನಗರಕ್ಕೆ ಬರದಂತೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ನಾಗನಿಗೆ ಎಚ್ಚರಿಕೆ ನೀಡಿದ್ದಾರೆ. ಕೊಲೆ, ಕೊಲೆಯತ್ನ, ರಾಬರಿ, ವಾಹನ ಕಳವು, ಡಕಾಯಿತಿ, ಕಿಡ್‌ನ್ಯಾಪ್ ಸೇರಿ ಹಲವು ಪ್ರಕರಣದಲ್ಲಿ ವಿಲ್ಸನ್​ ಗಾರ್ಡನ್​ ನಾಗ ಆರೋಪಿಯಾಗಿದ್ದಾನೆ.

ಕಟ್ಟುನಿಟ್ಟಿನ ವಾಹನ ತಪಾಸಣೆ

ಚುನಾವನಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ನಗರ ಪೊಲೀಸರು ಅಲರ್ಟ್​ ಆಗಿದ್ದಾರೆ. ನಗರಕ್ಕೆ ಪ್ರವೇಶಿಸುವ ಪ್ರತಿಯೊಂದು ವಾಹನಗಳ ಪರಿಶೀಲನೆ ನಡೆಸುವ ಕೆಲಸವನ್ನು ಮಾಡುತ್ತಿದ್ದಾರೆ. ನಗರ ಪೊಲೀಸ್​ ಆಯುಕ್ತ ಪ್ರತಾಪ್​ ರೆಡ್ಡಿಯವರ ಸೂಚನೆಯಂತೆ ಕಟ್ಟುನಿಟ್ಟಾಗಿ ವಾಹನ ತಪಾಸಣೆ ನಡೆಸಲಾಗುತ್ತಿದೆ.

ಬಹುಮುಖ್ಯವಾಗಿ ಹೊರ ಜಿಲ್ಲೆಗೆ ಸಂಪರ್ಕಸುವ ಚಿಕ್ಕಜಾಲ, ದೊಡ್ಡಬಳ್ಳಾಪುರ ರಸ್ತೆ, ಹೊಸೂರು ರಸ್ತೆಗಳಲ್ಲಿ ಪ್ರತಿ ವಾಹನವನ್ನೂ ತಪಾಸಣೆ ಮಾಡಲು ಸೂಚನೆ ನೀಡಲಾಗಿದೆ. ಈ ಹಿನ್ನಲೆ ನಗರದಲ್ಲಿ ಚೆಕ್​ ಪೋಸ್ಟ್​ಗಳಲ್ಲಿ ಹೆಚ್ಚಿನ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ನಗರಕ್ಕೆ ಅಕ್ರಮವಾಗಿ ಬರುವ ನಗದು ಹಾಗು ಮತದಾರರಿಗೆ ಅಮಿಷ ಒಡ್ಡುವ ಯಾವುದೇ ವಸ್ತುಗಳಿದ್ದರೂ ಅದರನ್ನ ವಶಕ್ಕೆ ಪಡೆಯಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Anekal Shootout | ಆನೇಕಲ್‌ನಲ್ಲಿ ಇಬ್ಬರು ಕಿರಾತಕರಿಗೆ ಗುಂಡೇಟು; ಕ್ರೈಂ ಲೋಕದ ಪಾತಕಿಗಳಿಗೆ ಪೊಲೀಸರ ಖಡಕ್ ವಾರ್ನಿಂಗ್

Exit mobile version