Site icon Vistara News

Crime News: ಸುಟ್ಟು ಹೋದ ಕಾರಿನಲ್ಲಿ ಅಪರಿಚಿತ ಶವ ಪತ್ತೆ

crime news

ಬೆಂಗಳೂರು: ನಗರದಲ್ಲಿ ಮತ್ತೊಂದು ಅಪರಿಚಿತನ ಶವ ಪತ್ತೆಯಾಗಿದೆ. ಒಂದು ಗುಜರಿ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ನಗರದ ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯ ದೇವಿನಗರದಲ್ಲಿ ಘಟನೆ ನಡೆದಿದೆ. ಈ ಸ್ಥಳದಲ್ಲಿ ಗುಜರಿ ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು. ಇಲ್ಲಿ ಹಳೆಯ ಕಾರೊಂದನ್ನು ನಿಲ್ಲಿಸಲಾಗಿದ್ದು, ಕಾರಿನಲ್ಲಿ ಅಪರಿಚಿತ ವ್ಯಕ್ತಿ ರಾತ್ರಿ ಮಲಗಿರುವ ಹಾಗೂ ಕಾರಿಗೆ ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾರು ಅರೆಬರೆ ಸುಟ್ಟಿದ್ದು, ವ್ಯಕ್ತಿ ಸಜೀವ ದಹನ ಆಗಿದ್ದಾನೆ ಎಂದು ಅನುಮಾನಿಸಲಾಗಿದೆ. ಕೊಲೆ ಆಯಾವನ್ನೂ ತನಿಖೆ ನಡೆಸಲಾಗುತ್ತಿದೆ.

ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸ್ಥಳೀಯರಿಂದ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಲಾರಿ ‌ಮೇಲೆ ಉರುಳಿ ಬಿದ್ದ ಬೃಹತ್ ಕಬ್ಬಿಣದ ಕಂಬ

ಶೇಷಾದ್ರಿಪುರಂ ಸಮೀಪದ ವಿವಿ ಗಿರಿ ಕಾಲೋನಿ ಬಳಿ ಸಿಮೆಂಟ್ ಲಾರಿಯ ‌ಮೇಲೆ ಬೃಹತ್ ಕಬ್ಬಿಣದ ಕಂಬವೊಂದು ಉರುಳಿ ಬಿದ್ದಿದೆ. ರೈಲ್ವೇ ಅಂಡರ್ ಪಾಸ್‌ಗೆ ತೆರಳುವ ಮಾರ್ಗದಲ್ಲಿ ಬೃಹತ್ ವಾಹನಗಳ ತಡೆಗೆ ನಿರ್ಮಿಸಿದ್ದ ಕಬ್ಬಿಣದ ಕಮಾನು ಉರುಳಿ ಬಿದ್ದಿದೆ. ಘಟನೆಯಲ್ಲಿ ಯಾವುದೇ ಜೀವಹಾನಿ ಅಥವಾ ಗಾಯಗಳಾಗಿಲ್ಲ. ಇದರಿಂದಾಗಿ ಶೇಷಾದ್ರಿಪುರಂ ಕಡೆಯಿಂದ ಗಾಂಧಿನಗರಕ್ಕೆ ತೆರಳುವ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಇದನ್ನೂ ಓದಿ: Road Accident: ಚಳ್ಳಕೆರೆಯಲ್ಲಿ ಲಾರಿ-ಬೈಕ್‌ ನಡುವೆ ಭೀಕರ ಅಪಘಾತ; ಚಕ್ರಕ್ಕೆ ಸಿಲುಕಿ ಯುವಕನ ದೇಹ ಛಿದ್ರ

Exit mobile version