Site icon Vistara News

ರೈಲಿನಲ್ಲಿ ಮಹಿಳೆಯ ಗಮನ ಬೇರೆಡೆ ಸೆಳೆದು ಆಭರಣ ದೋಚುವ ಕಳ್ಳಿಯರು

hana kalliyaru

ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಆಭರಣ ದೋಚುತ್ತಿದ್ದ ಇಬ್ಬರು ಈಗ ಪೊಲೀಸರ ಬಂಧನದಲ್ಲಿದ್ದಾರೆ. ಕೆ.ಆರ್. ಪುರಂನಿಂದ ತಿರುಪತಿಗೆ ಪ್ರಯಾಣ ಬೆಳಸಿದ್ದ ಮಹಿಳೆ ಅಲೇಕ್ಸಾ ಅವರ ಆಭರಣವನ್ನು ಇವರು ಕದ್ದಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ಹೋಟೆಲ್‌ನಲ್ಲಿ ಕಳ್ಳತನಕ್ಕೆ ಬಂದು ಚಿಕನ್ ಹುಡುಕಾಡಿದ, ಅದೂ ಸಿಗದೆ ವಾಪಸಾದ !

ಅಲೇಕ್ಸಾ ಗಮನ ಬೇರೆಡೆ ಸೇಳೆದು ವ್ಯಾನಿಟಿ ಬ್ಯಾಗ್‌ನಿಂದ 72 ಗ್ರಾಂ ಚಿನ್ನವನ್ನು ಕದ್ದಿದ್ದರು. ಚಿನ್ನ ಕಳೆದುಕೊಂಡ ಅಲೆಕ್ಸಾ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ರೈಲ್ವೆ ಪೊಲೀಸರಿಂದ ಇಬ್ಬರು ಮಹಿಳೆಯರನ್ನು ಬಂಧೀಸಿದ್ದಾರೆ. ಬಂಧಿತ ಆರೋಪಿಗಳನ್ನು ರೂಪ ಮತ್ತು ಶರಣ್ಯ ಎಂದು ಗುರುತಿಸಲಾಗಿದೆ.

ಪ್ರಯಾಣಿಕರು ಫ್ಲಾಟ್ ಫಾರಂನಿಂದ ರೈಲು ಹತ್ತುತ್ತಿದ್ದಂತೆ ಒಳಗೆ ನುಸುಳುತ್ತಿದ್ದ ಕಳ್ಳಿಯರು ಒಬ್ಬಂಟಿ ಮಹಿಳೆಯರನ್ನ ಟಾರ್ಗೇಟ್ ಮಾಡಿ ಚಿನ್ನ ಮತ್ತು ಹಣಗಳನ್ನು ದೋಚುತ್ತಿದ್ದರು. ಇದೀಗ ಪೊಲೀಸರು ಮಹಿಳೆಯರನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

ಇದನ್ನೂ ಓದಿ | ಹೆಂಡತಿಯೂ ಮಾಯ..ಹಣವೂ ಮಾಯ..!

Exit mobile version