Site icon Vistara News

Hit and Run: ಬೆಂಗಳೂರಿನಲ್ಲಿ ಹಿಟ್ ಆ್ಯಂಡ್‌ ರನ್‌, ಬೈಕ್ ಸವಾರ ಸಾವು

hit and run

ಬೆಂಗಳೂರು: ರಾಜಧಾನಿಯ ಮಡಿವಾಳ ಸಮೀಪದ ಮೈಕೋ ಬಂಡೆ ಬಳಿ ಅಪಘಾತ ಸಂಭವಿಸಿ (hit and run) ಬೈಕ್‌ ಸವಾರರೊಬ್ಬರು ಮೃತಪಟ್ಟಿದ್ದಾರೆ.

ರಾತ್ರಿ 12 ಗಂಟೆ ಸುಮಾರಿಗೆ ನಡೆದಿರುವ ಹಿಟ್‌ ಆ್ಯಂಡ್‌ ರನ್‌ ದುರ್ಘಟನೆಯಿದು. ವೇಗವಾಗಿ ಬಂದ ಕಂಟೇನರ್ ಲಾರಿ, ಬೈಕಿಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಗಾಯಗೊಂಡ ಸವಾರ ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ. ಮೃತರ ಹೆಸರು ಮತ್ತಿತರ ವಿವರ ತಿಳಿದುಬರಬೇಕಿದೆ. ಘಟನೆ ಸಂಬಂಧ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿಯ ಪತ್ತೆಗಾಗಿ ಸಿಸಿ ಟಿವಿ ಪರಿಶೀಲನೆ ನಡೆಸಲಾಗುತ್ತಿದೆ.

ನೆಲಮಂಗಲದಲ್ಲಿ ಅಕ್ರಮ ವೈನ್, ಕೂಲ್‌ಡ್ರಿಂಕ್ಸ್ ವಶಕ್ಕೆ

ನೆಲಮಂಗಲ: ಅಕ್ರಮವಾಗಿ ಸಾಗಿಸಲಾಗುತ್ತಿದ್ದ ವೈನ್ ಮತ್ತು ಕೂಲ್‌ಡ್ರಿಂಕ್‌ಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರ ಕರೇಕಲ್ ಗ್ರಾಮದ ಲ್ಯಾಂಕೋ ಟೋಲ್‌ ಬಳಿ ಇವು ಪತ್ತೆಯಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಕರೇಕಲ್ ಗ್ರಾಮದಲ್ಲಿ ಸುಮಾರು 8.8 ಲಕ್ಷ ಮೌಲ್ಯದ ವೈನ್ ಹಾಗೂ ಐದು ಲಕ್ಷ ಮೌಲ್ಯದ ಕೂಲ್ ಡ್ರಿಂಕ್ಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ.

ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಪತ್ತೆ

ಬೆಂಗಳೂರು: ಆರ್‌ಟಿ ನಗರ ಟಿವಿ ಟವರ್ ಸಮೀಪದ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ಹತ್ತು ಲಕ್ಷ ರೂ. ಹಣ ವಶಪಡಿಸಿಕೊಳ್ಳಲಾಗಿದೆ. ವಾಹನ ತಪಾಸಣೆ ವೇಳೆ ಬೆನ್ಜ್ ಕಾರು ತಡೆದು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದಾಗ ಇದು ಸಿಕ್ಕಿಬಿದ್ದಿದೆ.

ಮೊಹಮ್ಮದ್ ಷರೀಫ್, ಮಹಮ್ಮದ್ ಯುನೂಸ್ ಎಂಬವರ ಕಾರಿನಲ್ಲಿ ಹತ್ತು ಲಕ್ಷ ನಗದು ಹಣಕ್ಕೆ ಯಾವುದೇ ದಾಖಲೆ ಇಲ್ಲದೇ ಇರೋದು ಪತ್ತೆಯಾಗಿತ್ತು. ಕಾರಿನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ಹಣದ ಬಗ್ಗೆ ವಿಚಾರಣೆ ನಡೆಸಲಾಗಿದೆ. ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಶಾಪ್‌ ನಡೆಸುತ್ತಿರುವುದಾಗಿ ಕಾರಿನ ಮಾಲೀಕ ಹೇಳಿದ್ದಾರೆ.

ಇದನ್ನೂ ಓದಿ: Road Accident: ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಬಸ್​ ನಜ್ಜುಗುಜ್ಜು, ನಾಲ್ವರ ದುರ್ಮರಣ

Exit mobile version