Site icon Vistara News

Cow Slaughter : ಹುಬ್ಬಳ್ಳಿ ಕಸಾಯಿ ಖಾನೆಗಳಲ್ಲಿ ಗೋವುಗಳ ಮಾರಣಹೋಮ ಆರೋಪ; ಕಾನೂನು ಕ್ರಮಕ್ಕೆ ಬಜರಂಗ ದಳ ಆಗ್ರಹ

Hubballi cow slaughter

#image_title

ಹುಬ್ಬಳ್ಳಿ: ಮಹಾನಗರದ ಕಸಾಯಿ ಖಾನೆಗಳಲ್ಲಿ ಗೋವುಗಳ ಮಾರಣಹೋಮ (Cow Slaughter) ನಡೆಯುತ್ತಿದ್ದು, ಇದರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಬಜರಂಗ ದಳದ ಮುಖಂಡರು ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

ಹಳೆ ಹುಬ್ಬಳ್ಳಿಯ ಅಲ್ತಾಫ್‌ ನಗರದಲ್ಲಿ ಗೋಮಾಂಸ ದಂಧೆಕೋರರು ನೂರಾರು ಗೋವುಗಳನ್ನು ಅಕ್ರಮವಾಗಿ ಕೂಡಿ ಹಾಕಿದ್ದು, ಅವುಗಳನ್ನು ಅಮಾನುಷವಾಗಿ ಕೊಂದು ಮಾಂಸ ಮಾರಾಟ ಮಾಡುತ್ತಾರೆ ಎಂದು ಆರೋಪಿಸಿರುವ ಬಜರಂಗ ದಳ, ಕಸಾಯಿ ಖಾನೆಯ ವಿಡಿಯೊ ಚಿತ್ರೀಕರಿಸಿ ಪೊಲೀಸ್ ಆಯುಕ್ತರಿಗೆ ನೀಡಿದೆ.

ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು, ಅಪ್ರಾಪ್ತ ಮಕ್ಕಳನ್ನು ಕೂಡಾ ಗೋ ಹತ್ಯೆ ಪ್ರಕ್ರಿಯೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಗೋವುಗಳ ಮಾರಣಹೋಮವನ್ನು ತಡೆಯಬೇಕು. ಪೊಲೀಸರು ಕಾನೂನು ಕ್ರಮ ಕೈಗೊಳ್ಳದಿದ್ದರೆ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಸೇರಿ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ : Dharma dangal : ರಾಯಚೂರಿಗೂ ಕಾಲಿಟ್ಟ ವ್ಯಾಪಾರ ದಂಗಲ್‌; ಗುರುಗುಂಟ ಅಮರೇಶ್ವರ ಜಾತ್ರೆಗೆ ಅನ್ಯ ಧರ್ಮದ ವ್ಯಾಪಾರಿಗಳಿಗೆ ಪ್ರವೇಶವಿಲ್ಲ?

Exit mobile version