Site icon Vistara News

Illicit relationship: ಪತ್ನಿಯನ್ನು ಕೊಲೆ ಮಾಡಿ ಅತ್ತೆಗೆ ಫೋನ್‌ ಮಾಡಿ ಹೇಳಿದ ಅಳಿಯ!

murdered geetha

ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧದಿಂದ (Illicit relationship) ರೋಸಿದ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ (Murder case) , ನಾನು ನಿಮ್ಮ ಮಗಳನ್ನ ಕೊಲೆ ಮಾಡಿರುವುದಾಗಿ ಅತ್ತೆಗೆ ಫೋನ್ ಕಡೆ ಮಾಡಿ ಹೇಳಿದ್ದಾನೆ! ಈ ಘಟನೆ ಮೂಡಲಪಾಳ್ಯದ ಶಿವಾನಂದ ನಗರದಲ್ಲಿ ನಡೆದಿದೆ.

ಗೀತಾ (33) ಕೊಲೆಯಾದ ಮಹಿಳೆ. ಪತಿ ಶಂಕರ್ (43) ಕೊಲೆ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. 13 ವರ್ಷಗಳ ಹಿಂದೆ ಗೀತಾಳನ್ನು ಶಂಕರ್‌ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರೂ ಗೀತಾ ಪರಪುರುಷನೊಂದಿಗೆ ಸಂಬಂಧ ಹೊಂದಿದ್ದರು. ಆ ವಿಷಯ ತಿಳಿದ‌ ಶಂಕರ್ ಗೀತಾಗೆ ಬುದ್ಧಿ ಹೇಳಿದ್ದರು. ಆದರೂ ಗೀತಾ ಅನೈತಿಕ ಸಂಬಂಧ ಮುಂದುವರಿಸಿದ್ದರು. ಅಷ್ಟೇ ಅಲ್ಲದೇ ತಮ್ಮ ಪ್ರಿಯಕರನೊಂದಿಗೆ ಸೇರಿ ಪತಿಗೆ ಕೊಲೆ ಬೆದರಿಕೆ ಒಡ್ಡಿದ್ದರು. ಕಳೆದ ಹದಿನೈದು ದಿನಗಳಿಂದ ದಂಪತಿ ಜಗಳ ವಿಕೋಪಕ್ಕೆ ತಿರುಗಿತ್ತು.

ನಿನ್ನೆ ರಾತ್ರಿ ಅದೇ ರೀತಿ ಜಗಳ ನಡೆದಿದೆ. ಆ ವೇಳೆ ಆಕ್ರೋಶಕ್ಕೊಳಗಾದ ಶಂಕರ್‌ ಹರಿತವಾದ ಆಯುಧದಿಂದ ಗೀತಾಳ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಹೆಂಡತಿಯನ್ನು ಕೊಂದು ಶವವನ್ನು ಸೋಫಾ ಸೆಟ್ ಮೇಲೆ ತಂದಿಟ್ಟು, ಬಳಿಕ ಅತ್ತೆಗೆ ಕರೆ ಮಾಡಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಬಳಿಕ ಸಂಬಂಧಿಕರಿಗೆ, ಸ್ನೇಹಿತರಿಗೆ ವಿಷಯ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಚಂದ್ರಾಲೇಔಟ್ ಪೊಲೀಸರು ಕೇಸು ದಾಖಲಿಸಿಕೊಂಡು ಶಂಕರ್‌ನನ್ನು ಬಂಧಿಸಿದ್ದಾರೆ.

ʼʼಅವರ ಮನೆಯಲ್ಲಿ ಸಣ್ಣಪುಟ್ಟ ಗಲಾಟೆ ಆಗ್ತಿತ್ತು. ಒಂದು ತಿಂಗಳಿನಿಂದ ಮನೆಯಲ್ಲಿ ಗಲಾಟೆ ಜಾಸ್ತಿಯಾಗಿತ್ತು. ಗೀತಾ ಹಾಗೂ ಪತಿ ಎಲ್ಲರ ಜೊತೆ ಚೆನ್ನಾಗಿ ಮಾತಾಡುತ್ತಿದ್ದರು. ಪತ್ನಿ ಬೇರೆಯವರ ಸಹವಾಸ ಮಾಡಿದ್ದಾಳೆ. ಮನೆಗೆ ಯಾರೋ ಬಂದು ಹೋಗ್ತಾ ಇರುತ್ತಾರೆ ಎಂದು ಹೇಳುತ್ತಿದ್ದ. ಅವರ ಮನೆಯಲ್ಲಿ ಯಾವಾಗಲೂ ತಡರಾತ್ರಿವರೆಗೂ ಟಿವಿ ಆನ್ ಆಗಿರುತ್ತದೆ. ನಿನ್ನೆ ಟಿವಿ ಧ್ವನಿ ಜಾಸ್ತಿ ಇಟ್ಟಿದ್ದರು. ಹೀಗಾಗಿ ಜಗಳ ಆಡಿರುವುದು ನಮಗೆ ಗೊತ್ತಾಗಿಲ್ಲ. ಮರ್ಯಾದೆಗೆ ಅಂಜಿ ಕೊಲೆ ಮಾಡಿದೆ ಅಂದಿದ್ದಾರೆ. ಬೇರೆ ಸಂಬಂಧದ ಬಗ್ಗೆ ನಮಗೆ ಏನೂ ಗೊತ್ತಿಲ್ಲʼʼ ಎಂದು ಮೃತಳ ಸಂಬಂಧಿ ರಾಜೇಶ್ವರಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Ballari News: ಕೊಲೆ ಮಾಡಿದ ಸಿರುಗುಪ್ಪದ ಆಪಾದಿತರಿಗೆ ಜೀವಾವಧಿ ಶಿಕ್ಷೆ

Exit mobile version