Site icon Vistara News

ಇಲಿ ಕಚ್ಚಿದ್ದಕ್ಕೆ ₹5 ಲಕ್ಷ ಪರಿಹಾರ ಕೇಳಿದ ಭೂಪ ಮಾಡಿದ್ದೇನು?

rat

ಬೆಂಗಳೂರು : ನೀವು ನಾಯಿ ಕಚ್ಚಿದ್ದಕ್ಕೆ ಗಲಾಟೆ ನಡೆದಿದ್ದನ್ನು ನೋಡಿರುತ್ತೀರಿ, ಇಲ್ಲವೇ ಸುದ್ದಿ ಕೇಳಿರುತ್ತೀರಿ. ಇಲ್ಲೊಬ್ಬ ಇಲಿ ಕಚ್ಚಿದ್ದಕ್ಕೆ ರೊಚ್ಚಿಗೆದ್ದಿದ್ದಾನೆ! ಗಲಾಟೆ ಮಾಡಿ, ಪೊಲೀಸರ ಜೀವ ತ್ತಿನ್ನುತ್ತಿದ್ದಾನೆ.

ಈ ಘಟನೆ ನಡೆದಿರುವುದು ವಿದೇಶದಲ್ಲಿಯೇನೂ ಅಲ್ಲ ನಮ್ಮ ಬೆಂಗಳೂರಿನಲ್ಲಿಯೇ. ಆರ್​.ಟಿ. ನಗರದ ಕಂಫರ್ಟ್‌ ಎನ್‌ ಕ್ಲೇವ್‌ ಅಪಾರ್ಟ್‌ ಮೆಂಟ್‌ನಲ್ಲಿ. ಈ ಆಪಾರ್ಟ್‌ಮೆಂಟ್‌ನ ನಿವಾಸಿ ಲಕ್ಷ್ಮೀನಾರಾಯಣ ಇಲಿ ಕಚ್ಚಿದೆ ಎಂದು ಹೇಳಿ ಜಗಳ ಕಾಯುತ್ತಿದ್ದು, ಅಪಾರ್ಟ್​​ಮೆಂಟ್​​ನ ಅಸೋಸಿಯೇಷನ್ ಅಧ್ಯಕ್ಷರೊಂದಿಗೆ ಜಗಳ ಕಾದಿದ್ದಾರೆ. ಈ ಜಗಳ ಈಗ ಪೊಲೀಸ್‌ ಠಾಣೆಯ ಮಟ್ಟಿಲೇರಿದ್ದು, ಪೊಲೀಸರಿಗೂ ತಲೆನೋವು ತಂದಿದೆ.

ಲಕ್ಷ ಪರಿಹಾರ ಕೇಳಿದ ಭೂಪ

ಅಪಾರ್ಟ್‌ಮೆಂಟ್‌ನ ನಿವಾಸಿಗಳ ಪ್ರಕಾರ ಇಲಿಯೇನೂ ಲಕ್ಷ್ಮೀನಾರಾಯಣ ಅವರಿಗೆ ಕಚ್ಚಿಲ್ಲ. ಬದಲಾಗಿ ಅವರ ಇನ್ನೋವಾ ಕಾರ್​ನ ವೈಯರ್​ ಕತ್ತರಿಸಿದೆ. ಕಾರ್​ ಡ್ಯಾಮೇಜ್​ ಆಗಿದೆ. ಇದರಿಂದ ಸಿಟ್ಟಿಗೆದ್ದ ಲಕ್ಷ್ಮೀನಾರಾಯಣ, ಇದಕ್ಕೆ ಅಪಾರ್ಟ್‌ಮೆಂಟ್‌ನ ಅವ್ಯವಸ್ಥೆಯೇ ಕಾರಣ ಎಂದು ಹೇಳಿಕೊಂಡು ಈ ರೀತಿ ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ.

ಕೇವಲ ಇಲಿ ಕಚ್ಚಿದ್ದಕ್ಕೆ ಅವರು ೫ ಲಕ್ಷ ರೂ.ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಿದ್ದು, ಪರಿಹಾರ ಕೊಡದಿದ್ದರೆ ಅಪಾರ್ಟ್​​ಮೆಂಟ್​​ನ ಅಸೋಸಿಯೇಷನ್ ಅಧ್ಯಕ್ಷರನ್ನೇ ಕೊಲೆ ಮಾಡುವುದಾಗಿ ಬೆದರಿಕೆಯೂ ಹಾಕಿದ್ದಾರಂತೆ.

ಇದನ್ನು ಓದಿ| ಇಲಿಗಳಿಂದ ಪತ್ತೆಯಾಯ್ತು ಕಳೆದುಹೋದ ₹ 5 ಲಕ್ಷ ಮೌಲ್ಯದ ಚಿನ್ನ

ಮೊದ ಮೊದಲು ಅಪಾರ್ಟ್​​​ಮೆಂಟ್​ ನಿವಾಸಿಗಳು ಹಾಗೂ ಅಸೋಸಿಯೇಷನ್ ಅಧ್ಯಕ್ಷರು ಲಕ್ಷ್ಮೀನಾರಾಯಣರ ಹುಚ್ಚಾಟ ನೋಡಿಕೊಂಡು ಸುಮ್ಮನಿದ್ದರು. ಆದರೆ, ಇಷ್ಟಕ್ಕೆ ಸುಮ್ಮನಾಗದ ಲಕ್ಷ್ಮೀನಾರಯಣ್ ಪರಿಹಾರ ಕೊಡಲೇಬೇಕು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಬೇಸೆತ್ತ ಅಪಾರ್ಟ್​​ಮೆಂಟ್​ ನಿವಾಸಿಗಳು ಆರ್​.ಟಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಪಾರ್ಟ್​​ಮೆಂಟ್​​ ಮುಂದೆ ಕಸ ಸುರಿದಿರುವ ದೃಶ್ಯ

5 ಲಕ್ಷ ಪರಿಹಾರ ಕೊಡಲಿಲ್ಲ ಎಂಬ ಕೋಪದಲ್ಲಿ ಅಪಾರ್ಟ್​ಮೆಂಟ್​ ಗೇಟ್​​ ಮುಂದೆ ಕಸ ಸುರಿದು ಲಕ್ಷ್ಮೀ ನಾರಾಯಣ್​ ರಂಪಾಟ ಮಾಡಿದ್ದಾರೆ. ಇದೆಲ್ಲವೂ ಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಇವರ ಕಾಟ ತಾಳಲಾರದೆ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದು, ಲಕ್ಷ್ಮೀ ನಾರಾಯಣ್ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಈ ಸಮಸ್ಯೆಗೆ ಹೇಗೆ ಪರಿಹಾರ ಕಂಡು ಹಿಡಿಯುತ್ತಾರೆಯೋ ಕಾದು ನೋಡಬೇಕು.

Exit mobile version