Site icon Vistara News

ಕವಡೆ ಹಾಕಿ ಪಗಡೆ ಆಡಿಸಿದ ಜ್ಯೋತಿಷಿ: ದನದ ಕೊಟ್ಟಿಗೆ ನೆಪದಲ್ಲಿ ₹10 ಕೋಟಿಗೆ ಟೋಪಿ

ಕವಡೆ ಹಾಕಿ ಪಗಡೆ ಆಡಿಸಿದ ಜ್ಯೋತಿಷಿ

ಬೆಂಗಳೂರು : ಸಮಸ್ಯೆ ಎಂದು ಹೇಳಿಕೊಂಡು ಬಂದ ಅಮಾಯಕನನ್ನು ಜ್ಯೋತಿಷಿ ಮೋಸ ಮಾಡಿ ಹಳ್ಳಕ್ಕೆ ಬೀಳಿಸಿದ್ದಾನೆ ಇಲ್ಲೊಬ್ಬ ಭೂಪ. ನೆಲಮಂಗಲ ತಾಲೂಕಿನ ಶ್ರೀವಾಸಪುರ ಗ್ರಾಮ ಪಂಚಾಯತಿ ವ್ಯಾಪ್ತಿ ಚಿಕ್ಕಮಾರನಹಳ್ಳಿಯಲ್ಲಿ ಶಿವಕುಮಾರ್‌ ಎಂಬಾತನೇ ಕವಡೆ ಜ್ಯೋತಿಷಿಯಿಂದ ಯಾಮಾರಿದ ವ್ಯಕ್ತಿ.

ದನದ ಶೆಡ್‌ ಮಾಡಲು ಲೋನ್‌ ಟ್ರೈ ಮಾಡುವ ವಿಚಾರವಾಗಿ ಕವಡೆ ಶಾಸ್ತ್ರ ಕೇಳಲು ಜ್ಯೋತಿಷಿ ನಾಗರಾಜ್‌ ಬಳಿಗೆ ಶಿವಕುಮಾರ್‌ ಬಂದಿದ್ದಾನೆ. ಚಾಲಾಕಿ ನಾಗರಾಜು, ತನ್ನ ಶಿಷ್ಯ ಆನಂದ್‌ ಎಂಬಾತನ ಸಂಪರ್ಕವನ್ನು ಮಾಡಿಕೊಟ್ಟಿದ್ದ. ₹30 ರಿಂದ ಶಿವಕುಮಾರ್‌ಗೆ40 ಕೋಟಿ ಸಬ್ಸಿಡಿಯಲ್ಲಿ ಲೋನ್‌ ಮಾಡಿಕೊಡುತ್ತೇನೆ, ಅದಕ್ಕೆ ಸ್ವಲ್ಪ ಹಣ ಖರ್ಚಾಗುತ್ತದೆ ಎಂದು ಹೇಳಿ ಅಕೌಂಟ್‌ಗೆ ₹10 ಕೋಟಿ ಹಾಕಿಸಿಕೊಂಡಿದ್ದ ಆನಂದ್‌.

ಇದನ್ನೂ ಓದಿ | ಬೆಲ್ ಬಾಟಂ ಫಿಲ್ಮ್‌ ಸ್ಟೈಲ್‌ನಲ್ಲಿ ಯಾಮಾರಿಸಿ ಮಹಿಳೆಯ ಸರ ಎಗರಿಸಿದ!

ಸಾಲದ ಹಣದಲ್ಲಿ ಪೆಟ್ರೋಲ್‌ ಬಂಕ್‌ ಮಾಡಿಸಿಕೊಡುತ್ತೇನೆ, ಅದರಿಂದ ದುಡ್ಡು ಮಾಡಬಹುದು ಎಂದು ನಂಬಿಸಿದ್ದ ಚಾಲಾಕಿ ಆನಂದ್‌, ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಶಿವಕುಮಾರ್‌ನಿಂದ ಹಣ ಪಡೆದಿದ್ದಾನೆ.

ಅಷ್ಟೇ ಅಲ್ಲ ದೆಹಲಿಯಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ಡೆಪ್ಯುಟಿ ಛೇರ್ಮನ್ ಉದ್ಯೋಗ ಕೊಡಿಸುತ್ತೇನೆ ಎಂದೂ ನಂಬಿಸಿದ್ದಾನೆ. ಹೀಗೆ ಕವಡೆ ಜ್ಯೂತೀಷಿ ಹಾಗೂ ಆತನ ಶಿಷ್ಯ ಆನಂದ ಮಾಡಿದ ಮಾಸ್ಟರ್‌ ಪ್ಲಾನ್‌ಗೆ ಶಿವಕುಮಾರ್‌ ₹10 ಕೋಟಿ ಕಳೆದುಕೊಂಡಿದ್ದಾನೆ.

ದಿನ ಕಳೆದಂತೆ ಹಣವೂ ಇಲ್ಲದೇ, ಕವಡೆ ಜ್ಯೋತಿಷಿಯೂ ಇಲ್ಲದೇ ಕಂಗಾಲಾಗಿ ಪೊಲೀಸ್‌ ಮೆಟ್ಟಲೇರಿದ್ದಾನೆ  ಶಿಕುಮಾರ್‌. ಇದೀಗ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ | ಪೆಟ್ರೋಲ್‌ ವ್ಯಾಟ್‌ ತಾನೇ ಕಡಿತಗೊಳಿಸಿದ್ದಾಗಿ ಯಾಮಾರಿಸಿತೇ ಮಹಾರಾಷ್ಟ್ರ ಸರಕಾರ?

Exit mobile version