Site icon Vistara News

Modi In Bengaluru | ಅಧಿಕಾರದಲ್ಲಿ ಗೂಟ ಹೊಡ್ಕೊಂಡು ಕೂತಿರ್ತೀರ?: ಕೆಂಪೇಗೌಡರ ಪ್ರತಿಮೆ ಎದುರು BJP ವಿರುದ್ಧ ಗುಡುಗಿದ ಶರವಣ

jds protest

ದೇವನಹಳ್ಳಿ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆಗೆ ಆಹ್ವಾನಿಸಿಲ್ಲ ಎಂದು ಆರೋಪಿಸಿ ಜೆಡಿಎಸ್‌ ಪ್ರತಿಭಟನೆ ನಡೆಸಿದೆ.

ಪ್ರಧಾನಿ ಮೋದಿ ಅವರಿಂದ ಶುಕ್ರವಾರ ಉದ್ಘಾಟನೆಯಾದ ಪ್ರತಿಮೆಯ ಎದುರಲ್ಲಿ ವಿಧಾನ ಪರಿಷತ್‌ ಸದಸ್ಯ ಹಾಗೂ ರಾಝ್ಯ ಜೆಡಿಎಸ್‌ ವಕ್ತಾರ ಟಿ.ಎ. ಶರವಣ ಅವರ ನೇತೃತ್ವದಲ್ಲಿ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶರವಣ, ಇವತ್ತು ಕಲ್ಲೆಸೆದಿದ್ದೀರ. ನೀವೇನು ಅಧಿಕಾರದಲ್ಲಿ ಗೂಟ ಹೊಡೆದುಕೊಂಡೇ ಕೂತಿರುತ್ತೀರ? ಆರು ತಿಂಗಳಾದ ಮೇಲೆ ಜನರು ಇದಕ್ಕೆ ಉತ್ತರ ಕೊಡುತ್ತಾರೆ. ಇದು ಬಿಜೆಪಿ ನಾಯಕರಿಗೆ ನೀಡುತ್ತಿರುವ ಎಚ್ಚರಿಕೆ ಎಂದರು.

ಇದನ್ನೂ ಓದಿ | Modi In Bengaluru | CM ಫೋನ್‌ ಮಾಡಿ 3 ಗಂಟೆಯ ನಂತರ ಎಚ್‌.ಡಿ. ದೇವೇಗೌಡರಿಗೆ ಬಂತ ಇನ್ವಿಟೇಷನ್‌?

Exit mobile version