Site icon Vistara News

Mother and son death : ಪುಟ್ಟ ಮಗನನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ; ಅವಳಿಗಿತ್ತು ಅದೊಂದು ನೋವು

Mother and son death

ಆನೇಕಲ್: ತಾಯಿಯೊಬ್ಬಳು ತನ್ನ ಪುಟ್ಟ ಮಗನನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಪ್ರಾಣ (mother and son death) ಕಳೆದುಕೊಂಡ ದಾರುಣ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯಲಕ್ಷ್ಮಿ (35) ಎಂಬವರೇ ತನ್ನ ಏಳು ವರ್ಷದ ಮಗ ಹರಿಹರನ್‌ನ್ನು ಸೊಂಟಕ್ಕೆ ಕಟ್ಟಿಕೊಂಡು ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಸಕಲವಾರ ಕೆರೆಗೆ (sakalavara pond) ಹಾರಿ ಪ್ರಾಣ ಕಳೆದುಕೊಂಡವರು. ಇವರು ಸಿ.ಕೆ. ಪಾಳ್ಯದ ನಿವಾಸಿಗಳು.

ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ ಮತ್ತು ಮಗು

ವಿಜಯಲಕ್ಷ್ಮಿ ಅವರ ಕುಟುಂಬ ಮೂಲತಃ ಆಂಧ್ರ ಮೂಲದ್ದು. ಈ ಕುಟುಂಬ ಕೆಲವು ವರ್ಷಗಳಿಂದ ಸಿಕೆ ಪಾಳ್ಯದಲ್ಲಿ ವಾಸವಗಿತ್ತು. ಎರಡು ವರ್ಷದ ಹಿಂದೆ ವಿಜಯಲಕ್ಷ್ಮಿ ಅವರ ಪತಿ ಅಪಘಾತದಲ್ಲಿ ಮೃತಪಟ್ಟಿದ್ದರು. ಗಂಡನ ಸಾವಿನ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯ ಬದುಕಿನಲ್ಲಿ ಸಂಕಷ್ಟಗಳ ಸರಮಾಲೆಯೇ ಎದುರಾಗಿತ್ತು.

Mother and son suicide

ಪತಿಯ ಸಾವೇ ಇವರಿಗೆ ಮುಳುವಾಯಿತು

ನಿಜವೆಂದರೆ ಅವರ ಪತಿ ತೀರಿಕೊಂಡು ಆಗಸ್ಟ್‌ 13ಕ್ಕೆ ಸರಿಯಾಗಿ ಎರಡು ವರ್ಷ ಆಗುತ್ತಿದೆ. ಪತಿ ತೀರಿಕೊಂಡ ದಿನವೇ ಮಗುವಿನ ಜೊತೆಗೆ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಅವರು ಯಾವ ಮಟ್ಟದ ಸಮಸ್ಯೆಯಲ್ಲಿ ಇದ್ದರು ಎನ್ನುವುದನ್ನು ತೋರಿಸುತ್ತದೆ. ಆರ್ಥಿಕ ಮತ್ತು ಮಾನಸಿಕವಾಗಿ ಕುಗ್ಗಿದ್ದ ಅವರು ಏಳು ವರ್ಷದ ಮಗನನ್ನು ಮುಂದೆ ಸಾಕುವುದು ಹೇಗೆ ಎಂಬ ನೋವಿನಲ್ಲೇ ಇದ್ದು ಅದರಿಂದ ಮುಕ್ತಿ ಹೊಂದಲು ಸಾವಿನ ದಾರಿ ಹಿಡಿದರೇ ಎಂಬ ಸಂಶಯ ಎದುರಾಗಿದೆ.

ಸ್ಥಳಕ್ಕೆ ಬನ್ನೇರುಘಟ್ಟ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಾಯದಿಂದ ಮೃತ ದೇಹವನ್ನ ಹೊರತೆಗೆಯುವ ಕಾರ್ಯ ನಡೆಯುತ್ತಿದೆ.

Mother and son suicide

ಮಗು ಬದುಕಿ ಉಳಿದರೆ ಎಂಬ ಭಯದಿಂದ ಕಟ್ಟಿಕೊಂಡಿದ್ದರು

ಇತ್ತೀಚಿನ ಕೆಲವು ಆತ್ಮಹತ್ಯೆ ಪ್ರಕರಣಗಳಲ್ಲಿ ತಾಯಿ ಮತ್ತು ಮಕ್ಕಳು ಜತೆಯಾಗಿ ನೀರಿಗೆ ಹಾರಿದಾಗ ಏನೂ ಅರಿಯದ ಮಕ್ಕಳು ನೀರಿನಲ್ಲಿ ಮುಳುಗೇಳುತ್ತಾ ಕೊನೆಗೆ ಕೆರೆಯಿಂದ ಮೇಲೆದ್ದು ಬಂದ ಉದಾಹರಣೆಗಳಿವೆ. ಆದರೆ ಇಲ್ಲಿ ಮಗು ತನ್ನ ಜತೆಗೇ ಸಾಯಬೇಕು, ಒಂದು ವೇಳೆ ಬದುಕುಳಿದರೆ ಅವನಿಗೆ ಯಾರು ದಿಕ್ಕು ಎಂದು ಯೋಚಿಸಿದ ಈ ತಾಯಿ ಅವನನ್ನು ಸೊಂಟಕ್ಕೆ ಕಟ್ಟಿಕೊಂಡೇ ಹಾರಿದ್ದಾಳೆ. ತಾನು ಹೇಗಿದ್ದರೂ ಮುಳುಗುತ್ತೇನೆ, ಎಷ್ಟೇ ಕಷ್ಟವಾದರೂ ಮರಳಿ ಬದುಕುವ ಪ್ರಯತ್ನ ಮಾಡುವುದಿಲ್ಲ. ಹೀಗಾಗಿ ಮಗುವೂ ತನ್ನೊಂದಿಗೆ ಸತ್ತು ಹೋಗಲೇಬೇಕು ಎಂದು ಆಕೆ ತೀರ್ಮಾನಿಸಿದಂತಿದೆ.

ಇದನ್ನೂ ಓದಿ: Self Harming : ಮತ್ತೊಬ್ಬಳನ್ನು ಮೋಹಿಸಿದ ಪತಿರಾಯ; ಬೇಸತ್ತು ವಿಷ ಸೇವಿಸಿದಳು

ರಾಮನಗರದಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು

ಶನಿವಾರ ರಾಮನಗರ ಬಳಿ ಮನೆಯಲ್ಲಿ ತಮ್ಮ ಪ್ರೀತಿಗೆ ವಿರೋಧವಿದೆ ಎಂಬ ನೋವಿನಲ್ಲಿ ಸಣ್ಣ ವಯಸ್ಸಿನ ಇಬ್ಬರು ಯುವಕ-ಯುವತಿ ರೈಲಿನಡಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದರು. ಹೀಗೆ ಸಣ್ಣ ಮತ್ತು ದೊಡ್ಡ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.

Exit mobile version