Site icon Vistara News

Murder Case : ರಾಜಧಾನಿಯಲ್ಲಿ ಭಯಾನಕ ಘಟನೆ; ತಾಯಿ, 8 ವರ್ಷದ ಮಗನ ಬರ್ಬರ ಹತ್ಯೆ

Mother and son murder

ಬೆಂಗಳೂರು: ರಾಜಧಾನಿಯಲ್ಲಿ ಬೆಚ್ಚಿಬೀಳಿಸುವ ಭಯಾನಕ (Bangalore news) ಘಟನೆಯೊಂದು ನಡೆದಿದೆ. ತಾಯಿ ಮತ್ತು 8 ವರ್ಷದ ಮಗನನ್ನು ಕೊಲೆ (Murder case) ಮಾಡಲಾಗಿದೆ. ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ತಾಯಿ ಮತ್ತು ಮಗನ ಹಂತಕರು (Mother and son murdered) ಯಾರು ಎಂದು ಪತ್ತೆ ಹಚ್ಚಲು ಪೊಲೀಸರು ತಂಡವನ್ನು ರಚಿಸಿದ್ದಾರೆ.

ಬಾಗಲಗುಂಟೆಯ ರವೀಂದ್ರ ನಗರದಲ್ಲಿ ವಾಸವಾಗಿರುವ ನವನೀತ (35) ಎಂಬ ಮಹಿಳೆ ಹಾಗೂ ಅವರ ಎಂಟು ವರ್ಷದ ಮಗ ಸುಜನ್‌ನನ್ನು ಕೊಲ್ಲಲಾಗಿದೆ. ಮಂಗಳವಾರ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಬುಧವಾರ ಬೆಳಗ್ಗೆ ಹೊರ ಜಗತ್ತಿಗೆ ಬಯಲಾಯಿತು.

ಕೊಲೆಯಾದ ನವನೀತ ಮತ್ತು ಕೊಲೆ ನಡೆದ ಕಟ್ಟಡ

ತಾಯಿ ನವನೀತ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದರೆ, ಎಂಟು ವರ್ಷದ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಇಬ್ಬರ ಶವ ಕೂಡಾ ಬೆಡ್‌ ಮೇಲೆ ಬಿದ್ದಿದೆ. ಈ ಕೊಲೆಯನ್ನು ಮಾಡಿದ್ದು ಯಾರು ಎನ್ನುವುದು ನಿಗೂಢವಾಗಿದ್ದು, ಅದನ್ನು ಪತ್ತೆ ಹಚ್ಚಲು ಡಿಸಿಪಿ ಶಿವಪ್ರಕಾಶ್ ದೇವರಾಜ ಅವರು ವಿಶೇಷ ತಂಡವನ್ನು ರಚಿಸಿದ್ದಾರೆ.

ಪತಿಯಿಂದ ದೂರವಾಗಿದ್ದ ಮಹಿಳೆ

ನವನೀತ ಅವರು ಆಂಧ್ರ ಪ್ರದೇಶ ಮೂಲದವರೆಂದು ಹೇಳಲಾಗಿದೆ. ಕಳೆದ ಮೂರು ವರ್ಷಗಳಿಂದ ರವೀಂದ್ರ ನಗರದಲ್ಲಿ ವಾಸವಿದ್ದರು. ಆದರೆ, ಅಕ್ಕಪಕ್ಕದವರ ಜತೆಗೆ ಹೆಚ್ಚೇನೂ ಸಂಪರ್ಕ ಇರಲಿಲ್ಲ ಎನ್ನಲಾಗಿದೆ.

ಅವರು ಕೌಟುಂಬಿಕವಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದರು ಎನ್ನಲಾಗಿದ್ದು, ಎರಡು ವರ್ಷಗಳಿಂದ ಪತಿಯಿಂದ ದೂರವಾಗಿ ವಾಸಿಸುತ್ತಿದ್ದಾರೆ. ಅವರು ಏನು ಕೆಲಸ ಮಾಡುತ್ತಿದ್ದರು ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

ಇದನ್ನೂ ಓದಿ: Murder Case: ವೀಕೆಂಡ್‌ ಗೋವಾದಲ್ಲಿ ಮಜಾ ಮಾಡಿ ಮನೆಗೆ ಬಂದು ಪತ್ನಿಯ ಕೊಲೆ ಮಾಡಿದ ಪತಿ!

ಕೊಲೆಗಾರ ಯಾರು?

ಮಂಗಳವಾರ ನಡೆದಿರುವ ಈ ಕೊಲೆಯನ್ನು ಮಾಡಿದ್ದು ಯಾರು ಎನ್ನುವುದರ ಬಗ್ಗೆ ತನಿಖೆ ನಡೆಯಬೇಕಾಗಿದೆ. ನವನೀತ ಅವರಿಂದ ದೂರವಾಗಿರುವ ಪತಿಯ ಕೃತ್ಯ ಇದಾಗಿರಬಹುದೇ ಎಂಬ ಸಂಶಯದ ನೆಲೆಯಲ್ಲಿ ಮೊದಲ ಹಂತದ ತನಿಖೆ ನಡೆದಿದೆ. ಮಂಗಳವಾರ ಈ ಮನೆಗೆ ಯಾರು ಬಂದಿದ್ದಾರೆ ಎಂಬುದರ ಹುಡುಕಾಟವೂ ನಡೆದಿದೆ. ಹಂತಕ ಮೊದಲು ನವನೀತ ಅವರನ್ನು ಚೂರಿಯಿಂದ ಇರಿದಿದ್ದು, ತಡೆಯಲು ಹೋದ ಹುಡುಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Exit mobile version