Site icon Vistara News

Murder Case: ಪ್ರಿಯಕರನ ಜತೆಗಿದ್ದ ಪತ್ನಿಯನ್ನು ಕೊಂದ ಪತಿ

murder case

ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯನ್ನು ಪತಿ ಕತ್ತು ಸೀಳಿ ಕೊಂದು ಹಾಕಿದ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಬ್ಸುಮ್ ಬೇಬಿ ಕೊಲೆಯಾದ ಮಹಿಳೆ. ಹದಿನಾಲ್ಕು ವರ್ಷಗಳ ಕೊಲ್ಕತ್ತ ಮೂಲದ ತಬ್ಸುಮ್ ಮತ್ತು ಶೇಕ್ ಸೋಹೆಲ್ ಮದುವೆಯಾಗಿದ್ದರು. ಆರು ವರ್ಷಗಳ ಹಿಂದೆ ಪತ್ನಿಗೆ ಅಕ್ರಮ ಸಂಬಂಧ ಇರುವ ವಿಚಾರ ಗೊತ್ತಾಗಿ ವಾಪಸ್ಸು ಕೋಲ್ಕತ್ತಾಗೆ ಈತ ಕರೆದುಕೊಂಡು ಹೋಗಿದ್ದ. ಆದರೆ ತಬ್ಸುಮ್‌ ಮತ್ತೆ ಪತಿಯನ್ನು ಬಿಟ್ಟು ಪ್ರಿಯಕರನ ಜೊತೆಗೆ ಇರಲು ಬಂದಿದ್ದಳು.

ಆರು ವರ್ಷಗಳ ಬಳಿಕ ಬೆಂಗಳೂರಿಗೆ ಬಂದಿದ್ದ ಪತಿ ಸೋಹೆಲ್, ನಿನ್ನೆ ರಾತ್ರಿ ಮಾತನಾಡಬೇಕು ಎಂದು ತಬ್ಸುಮ್‌ಳನ್ನು ಭೇಟಿಯಾಗಿದ್ದ. ತಬ್ಸುಮ್‌ ತಂಗಿಯ ಮನೆಯಲ್ಲಿ ಭೇಟಿಯಾಗಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ಜಗಳದ ನಡುವೆ ಚಾಕುವಿನಿಂದ ತಬ್ಸುಮ್ ಕುತ್ತಿಗೆಗೆ ಚಾಕುವಿನಿಂದ ಸೋಹೆಲ್‌ ಇರಿದಿದ್ದಾನೆ. ಆರೋಪಿ ಶೇಕ್ ಸೋಹೆಲ್‌ನನ್ನು ಹೆಣ್ಣೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೂರು ನಾಡ ಬಂದೂಕು ಪತ್ತೆ

ವಿಜಯನಗರ: ವಿಜಯನಗರ ಜಿಲ್ಲೆಯಲ್ಲಿ ಮೂರು ನಾಡ ಬಂದೂಕು ಪತ್ತೆಯಾಗಿವೆ. ಇದಕ್ಕೆ ಸಂಬಂಧಿಸಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕೂಡ್ಲಿಗಿ ತಾಲೂಕಿನ ಗುಡಿಕೋಟೆ ಚಿನ್ನೇಹಳ್ಳಿ ಗ್ರಾಮದ ರೂಪ್ಲಾ ನಾಯ್ಕ್, ರಾಮಸಾಗರ ಹಟ್ಟಿ ಗ್ರಾಮದ ಬಿ. ಬಸವಾರಾಜ್‌ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.

ರೂಪ್ಲಾ ನಾಯ್ಕ್‌ನಿಂದ ಎರಡು ನಾಡ ಬಂದೂಕು, 250 ಗ್ರಾಂ ಮದ್ದಿನ ಪುಡಿ, 3 ಅಡಿ ಕಬ್ಬಿಣ ಪೈಪ್, 17 ಖಾಲಿ ಕೇಪು, ಒಂದು ಟವೆಲ್, ಬಸವರಾಜ್‌ನಿಂದ ಒಂದು ನಾಡ ಬಂದೂಕು, 150 ಗ್ರಾಂ ಮದ್ದಿನ ಪುಡಿ, ಬಟ್ಟೆ ಚೀಲ, ಒಂದು ಮೋಟಾರು ಬೈಕ್ ವಶಕ್ಕೆ ಪಡೆಯಲಾಗಿದೆ. ರೂಪ್ಲಾ ನಾಯ್ಕ್ ಕೂಡ್ಲಿಗಿಯ ಗಂಡಬೊಮ್ಮನಹಳ್ಳಿ ಅರಣ್ಯದಲ್ಲಿ ಹಾಗೂ ಬಸವರಾಜ್ ಹರವದಿ ಗ್ರಾಮದ ಅರಣ್ಯದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಅನುಮತಿ ಇಲ್ಲದ ನಾಡ ಬಂದೂಕು ಉಪಯೋಗ ಮಾಡುತ್ತಿದ್ದರು. ಖಾನಾಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Robbery Case: ಬೆಂಗಳೂರು ಹೊರವಲಯದಲ್ಲಿ ರೌಡಿ ಶೀಟರ್‌ಗಳಿಂದ ಮನೆ ದರೋಡೆ

Exit mobile version