Site icon Vistara News

Murder Case: ಗಂಡನನ್ನು ಕೊಂದು ಚರಂಡಿಗೆಸೆದು ಕಾಣೆಯಾಗಿದ್ದಾಳೆಂದು ದೂರು ನೀಡಿದಳು!

sampigehalli murder

ಬೆಂಗಳೂರು: ಸಂಪಿಗೆಹಳ್ಳಿಯಲ್ಲಿ ನಡೆದ ಬಿಹಾರಿ ಶಕೀಲ್ ಎಂಬಾತನ ಕೊಲೆ ಪ್ರಕರಣವನ್ನು (Murder Case) ಪೊಲೀಸರು ಭೇದಿಸಿದ್ದಾರೆ. ಪತ್ನಿಯೇ ತನ್ನ ಅಕ್ಕನ ಜತೆ ಸೇರಿ ಕೊಲೆ ಮಾಡಿರುವುದು (wife kills husband) ಬಯಲಾಗಿದೆ. ಈಕೆ ಗಂಡನ ಹತ್ಯೆ ಮಾಡಿ ಆತ ಕಾಣೆಯಾಗಿದ್ದಾನೆಂದು ಸ್ಟೇಷನ್‌ಗೆ ಬಂದು ದೂರು ನೀಡಿದ್ದಳು.

ಶಕೀಲ್ ಅಕ್ತಾರ್ ಎಂಬುದು ಕೊಲೆಯಾದಾತನ ಹೆಸರು. ಈತನ ಎರಡನೇ ಪತ್ನಿ ನಜೀರ್ ಖಾಟುನ್ (೨೫) ಹಾಗೂ ಆಕೆಯ ಅಕ್ಕ ಕಾಶ್ಮೀರಿ(೨೮) ಬಂಧಿತ ಆರೋಪಿಗಳು. ಸಂಪಿಗೆಹಳ್ಳಿಯ ಶಕೀಲ್ ನಿವಾಸದಲ್ಲಿ ಕೊಲೆ ನಡೆದಿತ್ತು. ಇಂದೇ ತಿಂಗಳ 9ರಂದು ರಾತ್ರಿ ಆರೋಪಿಗಳು ಬಿಹಾರಿ ಶಕೀಲ್‌ನ ಹತ್ಯೆ ಮಾಡಿದ್ದರು.

ಅಂದು ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡ ಪಾತಕಿಗಳು, ಯಾರ ಗಮನಕ್ಕೂ ಬಾರದ ರೀತಿ ಕೊಲೆಗೆ ಖತರ್ನಾಕ್ ಪ್ಲ್ಯಾನ್ ಮಾಡಿದ್ದಾರೆ. ಮಂಚದ ಮೇಲೆ ಮಲಗಿದ್ದ ಶಕೀಲ್ ಎದೆ ಮೇಲೆ ಕುಳಿತ ಎರಡನೇ ಪತ್ನಿ ನಜೀರ್‌, ಆತನ ಕತ್ತು ಹಿಸುಕಿದ್ದಳು. ನಾದಿನಿ ಕಾಶ್ಮೀರಿ ಆತನ ಕೈಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು.

ಮಂಚದ ಮೇಲಿಂದ ಕೆಳಗೆ ಬಿದ್ದರೂ ಬಿಡದೆ ಕತ್ತು ಹಿಸುಕಿ ಇಬ್ಬರೂ ಕೊಲೆ ಮಾಡಿದ್ದರು. ಹತ್ಯೆ ಬಳಿಕ ಬೆಡ್ ಶೀಟ್‌ನಲ್ಲಿ ಶವವನ್ನು ಕಟ್ಟಿ, ಮಧ್ಯರಾತ್ರಿ ಭಾರಿ ಮಳೆಯ ನಡುವೆ ಶವ ಸಾಗಿಸಿ ಮನೆಯಿಂದ ಸ್ವಲ್ಪ ದೂರದಲ್ಲೇ ಇದ್ದ ಪಿಟ್‌ಗೆ ಹಾಕಿ ಬಂದಿದ್ದರು. ಎರಡು ದಿನ ಬಿಟ್ಟು, ಗಂಡ ಕಾಣೆಯಾಗಿದ್ದಾನೆಂದು ಆಕೆಯೇ ಠಾಣೆಗೆ ಬಂದು ದೂರು ನೀಡಿದ್ದಳು.

ಅ.15ರಂದು ಕೆಟ್ಟವಾಸನೆ ಬರುತ್ತಿದ್ದ ಮಾಹಿತಿಯ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಿದಾಗ ಪಿಟ್‌ನಲ್ಲಿ ಮೃತದೇಹ ಪತ್ತೆಯಾಗಿತ್ತು. ತನಿಖೆ ಕೈಗೊಂಡಿದ್ದ ಸಂಪಿಗೇಹಳ್ಳಿ ಪೊಲೀಸರು ಸಹೋದರಿಯರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Murder Case: ದೊಣ್ಣೆಯಿಂದ ಹೊಡೆದು ತಂದೆಯನ್ನೇ ಹತ್ಯೆ‌ಗೈದ ಮಗ

Exit mobile version