Site icon Vistara News

Murder News: ಸಾಲ ನೀಡಿದ, ವಾಪಸು ಕೇಳಿದ್ದಕ್ಕೆ ಕೊಲೆಯಾದ

Murder

ಬೆಂಗಳೂರು: ಹಣಕಾಸಿನ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಹಣಕಾಸು ಸಾಲ ನೀಡಿದ ಯುವಕನೊಬ್ಬನನ್ನು ಸಾಲ ಪಡೆದವನು ತಿವಿದು ಕೊಲೆ ಮಾಡಿದ್ದಾನೆ. ಬಾಣಸವಾಡಿಯ ಶೇಖರ್ (29) ವರ್ಷ ಸಾವನ್ನಪ್ಪಿರುವ ಯುವಕ.

ಬಾಣಸವಾಡಿ ಸುತ್ತಮುತ್ತ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಮೃತ ಶೇಖರ್, ಮನೋಜ್ ಎಂಬಾತನಿಗೆ ಈ ಹಿಂದೆ ಹಣ ನೀಡಿದ್ದ. ತಡರಾತ್ರಿ ಕುಡಿದ ಅಮಲಿನಲ್ಲಿ ಕೊಟ್ಟ ಹಣ ವಾಪಸ್ ಕೊಡಲು ಕೇಳಿದ್ದ. ಈ ವೇಳೆ ಮನೋಜ್ ತನ್ನ ಸ್ನೇಹಿತರ ಜೊತೆ ಬಂದು ಗಲಾಟೆ ಮಾಡಿದ್ದ. ಹಣ ಕೊಡುವುದಿಲ್ಲ, ಏನು ಬೇಕಾದರೂ ಮಾಡಿಕೋ ಎಂದಿದ್ದ. ಇದರಿಂದ ಜಗಳ ವಿಕೋಪಕ್ಕೆ ಹೋಗಿ ಮನೋಜ್‌ ಚಾಕುವಿನಿಂದ ಇರಿದಿದ್ದಾನೆ.

ಹೊಟ್ಟೆ ಭಾಗಕ್ಕೆ ಮೂರ್ನಾಲ್ಕು ಕಡೆ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ಶೇಖರ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಕೊಲೆ ಮಾಡಿದ ಬಳಿಕ ಮನೋಜ್ ಹಾಗು ಸ್ನೇಹಿತರು ಪರಾರಿಯಾಗಿದ್ದಾರೆ. ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗೆ ಶೋಧ ನಡೆದಿದೆ.

ಇದನ್ನೂ ಓದಿ: Pocso case: ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ತಾತನಿಗೆ 20 ವರ್ಷ ಜೈಲು

Exit mobile version