Site icon Vistara News

Road Accident : BMTC ಬಳಿಕ ಈಗ KSRTC ಸರದಿ; ಬಸ್‌ ಧಾವಂತಕ್ಕೆ ಬೈಕ್‌ ಸವಾರ ದಾರುಣ ಬಲಿ

Rad Accident KSRTC Bus

ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ಗಳ ಅಬ್ಬರಕ್ಕೆ ಆಗಾಗ ಪ್ರಾಣ ಹೋಗುವುದು ನಡೆಯುತ್ತಿದೆ. ಇದೀಗ ಕಿಲ್ಲರ್ ಬಿಎಂಟಿಸಿ ನಂತರ ಕೆಎಸ್ಆ‌ರ್‌ಟಿಸಿ ಸರದಿ ಕಾಣಿಸಿಕೊಂಡಿದೆ. ಬೆಂಗಳೂರಿನ (Bangalore News) ಯಶವಂತ ಪುರ ಮೆಟ್ರೋ ಸ್ಟೇಷನ್ ಬಳಿ ಬೆಳಗ್ಗೆ 10.30ಕ್ಕೆ ನಡೆದ ಅಪಘಾತದಲ್ಲಿ (Road Accident) ಕೆಎಸ್‌ಆರ್‌ಟಿಸಿ ಬಸ್ಸಿಗೆ (KSRTC Bus accident) ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ನಾಗಸಂದ್ರ ನಿವಾಸಿ ರಾಜೇಂದ್ರ (45) ಅವರು ಬೈಕ್‌ನಲ್ಲಿ ಬರುವ ವೇಳೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಜೇಂದ್ರ ಅವರು ಎಡಬದಿಯಲ್ಲಿ ಬೈಕ್ ನಲ್ಲಿ ಸಾಗುತ್ತಿದ್ದರು. ಆಗ ಬಲಭಾಗದಿಂದ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ರಾಜೇಂದ್ರ ಅವರು ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಬಸ್‌ನ ಚಕ್ರ ರಾಜೇಂದ್ರ ಅವರ ತಲೆ ಮೇಲೆ ಬಸ್ ಹರಿದ ಹಿನ್ನಲೆಯಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.. ಯಶವಂತಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Road Accident : ಕೆಎಸ್ ಆರ್ ಟಿಸಿ ಬಸ್ ಚಾಲಕನ ತಪ್ಪಿಲ್ಲ ಎಂದ ಸಾರ್ವಜನಿಕರು

ಈ ನಡುವೆ, ಘಟನೆಯಲ್ಲಿ ಬಸ್‌ ಚಾಲಕನ ತಪ್ಪಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದ್ವಿಚಕ್ರ ವಾಹನ ಸವಾರ ಬಸ್ಸಿನ ಎಡಭಾಗಕ್ಕೆ ಬಂದಿದ್ದ. ಬೈಕ್‌ನ ಮಿರರ್ ತಾಗಿ ಕೆಳಗೆ ಬಿದ್ದ ವೇಳೆ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬಸ್‌ನ ಚಾಲಕ ಎಲ್ಲೂ ಪರಾರಿಯಾಗದೆ ಸ್ಥಳದಲ್ಲೇ ನಿಂತು ಕಣ್ಣೀರು ಹಾಕಿದ್ದರು. ಸ್ಚಲ್ಪ ಜೀವ ಇದ್ದರೂ ಕೂಡ ನಾವು ಅವರನ್ನ ಬಚಾವು ಮಾಡುತ್ತಿದ್ದೆವು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಹೇಳಿದ್ದಾರೆ.

ಇದನ್ನೂ ಓದಿ : Road Accident : ಅಪಘಾತದಲ್ಲಿ ಯುವಕ ಸಾವು; ಡಿಕ್ಕಿ ಹೊಡೆದ ಸವಾರ ಪಶ್ಚಾತ್ತಾಪದಿಂದ ಆತ್ಮಹತ್ಯೆ

ಬಸ್‌ ಚಾಲಕ ವಶಕ್ಕೆ: ಡಿಸಿಪಿ ಸಿರಿಗೌರಿ ಹೇಳಿಕೆ

ʻʻಇವತ್ತು ಬೆಳಗ್ಗೆ 10.30ರ ಸುಮಾರಿಗೆ ಮೆಟ್ರೋ ನಿಲ್ದಾಣದ ಕೆಳಗೆ ಘಟನೆ ನಡೆದಿದೆ. 45 ವರ್ಷದ ರಾಜೇಂದ್ರ ಎಂಬವರು ಮೃತಪಟ್ಟಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಜಿಎಸ್ ಟಿ ಆಫೀಸ್‌ಗೆ ಹೋಗುವಾಗ ಬಸ್ ಗೆ ಡಿಕ್ಕಿ ಹೊಡೆದು ಅಪಘಾತ ಆಗಿದೆ. ಬೈಕ್‌ನ ಮಿರರ್ ಬಸ್‌ಗೆ ಟಚ್ ಆಗಿ ಅಪಘಾತ ಉಂಟಾಗಿದೆ.. ಈ ವೇಳೆ ಘಟನಾ ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಸದ್ಯ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆʼʼ ಎಂದು ಉತ್ತರ ವಿಭಾಗದ ಸಂಚಾರಿ ಡಿಸಿಪಿ ಸಿರಿಗೌರಿ ಹೇಳಿದ್ದಾರೆ.

Exit mobile version