Site icon Vistara News

Stabbing Case: ದೈಹಿಕ ಸಂಬಂಧ ನಿಲ್ಲಿಸಿದ್ದಕ್ಕೆ ವಿವಾಹಿತೆಗೆ ಚೂರಿಯಿಂದ ಇರಿದ!

stabbing rajanna

ಬೆಂಗಳೂರು: ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ದೈಹಿಕ ಸಂಬಂಧವನ್ನು ನಿಲ್ಲಿಸಿದ್ದಕ್ಕೆ ವಿವಾಹಿತ ಮಹಿಳೆಗೆ ಚೂರಿಯಿಂದ ಇರಿದ ವ್ಯಕ್ತಿಯೊಬ್ಬ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಘಟನೆ ಯಲಚೇನಹಳ್ಳಿ‌ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ. ರಾಜಣ್ಣ ಎಂಬಾತ ಹಲ್ಲೆ ಆರೋಪಿ. ಈತ ವಿವಾಹಿತೆಯೊಬ್ಬಳ ಜೊತೆಗೆ ನಾಲ್ಕು ವರ್ಷದಿಂದ ದೈಹಿಕ ಸಂಬಂಧ ಹೊಂದಿದ್ದ. ಆದರೆ ಮಕ್ಕಳು ದೊಡ್ಡವರಾದರು ಎಂದು ಈ ಸಂಬಂಧಕ್ಕೆ ಮಹಿಳೆ ಫುಲ್‌ಸ್ಟಾಪ್‌ ಹಾಕಿದ್ದರು. ಆದರೆ ಈತ ನಿನ್ನ ಬಿಟ್ಟು ನಾನು ಬದುಕುವುದಿಲ್ಲ, ನೀನು‌ ನನಗೆ ಬೇಕೇ ಬೇಕು ಎಂದು ಮಹಿಳೆಯನ್ನು ಬೆಂಬಿಡದೆ ಕಾಡುತ್ತಿದ್ದ.

ಯಲಚೇನಹಳ್ಳಿ ಮೆಟ್ರೋ ಬಳಿ ಈಕೆಯ ಹಿಂದೆ ಹೋಗಿ ಕಾಡಿದ್ದ ಆರೋಪಿ, ಆಕೆ ನಿರಾಕರಿಸಿದಾಗ ಚೂರಿಯಿಂದ ಇರಿದಿದ್ದ. ಜೊತೆಗೆ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಕೋಣನಕುಂಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಗಾಯಾಳು ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Assault Case: ಯುವಕನಿಗೆ ಚಾಕು ಇರಿದು ಮಾರಣಾಂತಿಕ ಹಲ್ಲೆ

Exit mobile version