Site icon Vistara News

Murder | ಅನೈತಿಕ ಸಂಬಂಧ ಶಂಕೆ; ಮಚ್ಚಿನಿಂದ ಕೊಚ್ಚಿ ಪತ್ನಿಯ ಕೊಂದ ಪತಿ

Accident

ಕೆ.ಆರ್.ಪುರ: ಅನೈತಿಕ ಸಂಬಂಧ ಅನುಮಾನದಿಂದ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ(Murder) ಮಾಡಿದ ಘಟನೆ ನಗರದ ಟಿ.ಸಿ.ಪಾಳ್ಯದ ಪಟಾಕಿ ಗೋಡನ್ ರಸ್ತೆಯ ಮನೆಯೊಂದರಲ್ಲಿ ನಡೆದಿದೆ.

ಜಾನ್ಸಿಪ್ಲೋರಾ(30) ಕೊಲೆಯಾದ ದುರ್ದೈವಿ. ಆರೋಪಿ ಪತಿ ಜಾನ್ ಸುಪ್ರಿತ್(34) ಕೊಲೆ ಮಾಡಿದಾತ. ಚಿತ್ರದುರ್ಗ ಮೂಲದವರಾದ ಜಾನ್‌ ಶಾಮಿಯಾನ ವ್ಯಾಪಾರ ಮಾಡುತ್ತಿದ್ದ. ಕಳೆದ ಎಂಟು ವರ್ಷಗಳ ಹಿಂದೆ ನ್ಯಾನ್ಸಿ ಪ್ಲೋರಾಳನ್ನು ಪ್ರೀತಿಸಿ ಮದುವೆಯಾಗಿದ್ದ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ನ್ಯಾನ್ಸಿ ಪ್ಲೋರಾ ಬೇರೋಬ್ಬನೊಂದಿಗೆ ಅನೈತಿಕ ಸಂಭಂದ ಇಟ್ಟುಕೊಂಡಿದ್ದಾಳೆ ಎಂದು ಆಗಾಗ ಮನೆಯಲ್ಲಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಆರೋಪಿಯ ತಂದೆ, ತಾಯಿ ಮೊಮ್ಮಕ್ಕಳೊಂದಿಗೆ ನೆಲಮಹಡಿಯ ಮನೆಯಲ್ಲಿದ್ದಾಗ ಮೊದಲ ಮಹಡಿಯಲ್ಲಿ ಜಾನ್ ಸುಪ್ರಿತ್ ಈ ಕೃತ್ಯ ನಡೆಸಿದ್ದಾನೆ. ಆರೋಪಿಯನ್ನು ಬಂಧಿಸಿರುವ ಕೆ.ಆರ್‌.ಪುರ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Leopard Attack | ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ದಾಳಿ; ಕೃಷಿ ಕಾರ್ಮಿಕ ಮಹಿಳೆ ಸಾವು

Exit mobile version