Site icon Vistara News

ಬಿಜೆಪಿ ಮುಖಂಡ ಅನಂತರಾಜು ಸೂಸೈಡ್ ಕೇಸ್ ಗೆ ಮೇಜರ್ ಟ್ವಿಸ್ಟ್!

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಸೂಸೈಡ್ ಪ್ರಕರಣ ಈಗೊಂದು ಹೊಸ ತಿರುವು ಪಡೆದಿದೆ. ಮೇ 12ರಂದು ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದರು. ಅನಾರೋಗ್ಯದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾರಂಭದಲ್ಲಿ ಊಹಿಸಲಾಗಿತ್ತು. ನಂತರದಲ್ಲಿ, ಅನಂತ್‌ರಾಜು ಹನಿಟ್ರಾಪ್‌ಗೆ ಒಳಗಾಗಿ ಸೂಸೈಡ್‌ ಮಾಡಿಕೊಂಡಿದ್ದರೆಂದು ವರದಿಯಾಗಿತ್ತು. ಈ ಸಂಬಂಧ ರೇಖಾ ಎಂಬಾಕೆಯನ್ನು ಬಂಧಿಸಲಾಗಿತ್ತು. ಆದರೆ, ಈಗ ಅನಂತ್‌ರಾಜು ಪತ್ನಿ ಸುಮ ಹಾಗೂ ರೇಖಾ ನಡುವಿನ ಸಂಭಾಷಣೆ ಬಹಿರಂಗವಾಗಿದೆ.

ರೇಖಾ

ಕಳೆದ ಆರು ವರ್ಷಗಳಿಂದ ರೇಖಾ ಹಾಗೂ ಅನಂತರಾಜು ಸಂಬಂಧ ಹೊಂದಿದ್ದರು. ಈ ವಿಷಯ ತಿಳಿದು ಅನಂತರಾಜು ಪತ್ನಿ ಸುಮಾ ಕೆಂಡಾಮಂಡಲಗೊಂಡಿದ್ದರು. ಈ ವೇಳೆ ಕೋಪದಲ್ಲಿ ರೇಖಾ ಅವರಿಗೆ ಕರೆ ಮಾಡಿ ಅನಂತರಾಜು ಅವರನ್ನು ಸಾಯಿಸುವುದಾಗಿ ಬೆದರಿಕೆ ಒಡ್ಡಿದ್ದರು. ಇನ್ನು ಸ್ವಲ್ಪ ದಿನಗಳಲ್ಲಿ ಅವರ ಸಾವಿನ ಸುದ್ದಿ ಫೇಸ್‌ಬುಕ್‌ನಲ್ಲಿ ಬರುವುದಾಗಿ ಫೋನ್‌ನಲ್ಲಿ ಧಮ್ಕಿ ಹಾಕಿದ್ದರು. ಅನಂತ್‌ರಾಜು ಹೃದಯಾಘಾತದಿಂದ ಸಾವನ್ನಪ್ಪಿರುವ ಸುದ್ದಿ ಬಹಿರಂಗವಾಗುವುದಾಗಿ ರೇಖಾ ಅವರಿಗೆ 20 ದಿನಗಳ ಮುನ್ನವೇ ಸುಮಾ ತಿಳಿಸಿದ್ದರು.

ಫೋನ್‌ಕಾಲ್‌ನಲ್ಲಿ ರೇಖಾ ಕಣ್ಣೀರಿಟ್ಟಿದ್ದರು. ಅನಂತರಾಜು ಅವರಿಗೆ ಏನೂ ತೊಂದರೆ ನೀಡದಂತೆ ಬೇಡಿಕೊಂಡಿದ್ದರು. ಅದರೆ ಸುಮಾ ಅದಾವುದನ್ನೂ ಲೆಕ್ಕಿಸದೇ ಅನಂತು ಅವರ ಮೇಲೆ ಹಲ್ಲೆ ನಡೆಸಿದ್ದು ಫೋನ್‌ಕಾಲ್‌ನಲ್ಲಿ ರೆಕಾರ್ಡ್‌ ಆಗಿದೆ.

ಈ ಫೋನ್‌ಕಾಲ್‌ ಕೇಳಿದ ಬಳಿಕ ಅನಂತರಾಜು ಅವರನ್ನು ಹನಿಟ್ರಾಪ್‌ ಮಾಡಲಾಗಿತ್ತು ಎಂದು ಸುಮಾ ಸುಳ್ಳು ಕಂಪ್ಲೇಂಟ್‌ ಕೊಟ್ಟಿದ್ದರೇ ಎಂಬ ಸಂದೇಹ ಉಂಟುಮಾಡಿದೆ. ಅನಂತ್‌ ರಾಜು ಅವರ ಸಾವಿನ ಹಿಂದೆ ಪತ್ನಿ ಸುಮಾ ಅವರ ಕೈವಾಡ ಇದೆಯೇ ಎಂಬುದರ ಕುರಿತು ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಗೆ ಮಹಿಳೆ ಕಾರಣ !

Exit mobile version