Site icon Vistara News

ವಿಸ್ತಾರ ನ್ಯೂಸ್‌ಗೆ ಶುಭ ಹಾರೈಸಿದ ವಾಗ್ದೇವಿ ಶಿಕ್ಷಣ ಸಮೂಹದ ಚೇರ್ಮನ್‌ ಹರೀಶ್

vagdevi harish visit

ಬೆಂಗಳೂರು: ವಾಗ್ದೇವಿ ಶಿಕ್ಷಣ ಸಮೂಹದ ಚೇರ್ಮನ್ ಹರೀಶ್ ಕೆ. ಅವರು ಗುರುವಾರ ವಿಸ್ತಾರ ನ್ಯೂಸ್ ಕಚೇರಿಗೆ ಭೇಟಿ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ವಿಸ್ತಾರ’ ಹೆಸರೇ ಅರ್ಥಪೂರ್ಣವಾಗಿದೆ. ಈ ಸುದ್ದಿ ಮಾಧ್ಯಮ ವಿಸ್ತಾರವಾಗಿ ಬೆಳೆಯಲಿ ಎಂದರು.

ವಿಸ್ತಾರ ನ್ಯೂಸ್ ಕಚೇರಿ ಅಚ್ಚುಕಟ್ಟಾಗಿದೆ. ಇಲ್ಲಿಯ ಅಚ್ಚುಕಟ್ಟುತನ ಮತ್ತು ಅತ್ಯಾಧುನಿಕ ವ್ಯವಸ್ಥೆ ಕಂಡು ಖುಷಿಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ವಿಸ್ತಾರ ನ್ಯೂಸ್ ಕಚೇರಿ ವೀಕ್ಷಿಸಿದ ವಾಗ್ದೇವಿ ಶಿಕ್ಷಣ ಸಮೂಹದ ಚೇರ್ಮನ್ ಹರೀಶ್ ಕೆ.

ವಿಸ್ತಾರ ನ್ಯೂಸ್ ವೆಬ್‌ಸೈಟ್ ಮತ್ತು ಯುಟ್ಯೂಬ್ ಚಾನೆಲ್ ಗಳು ಉತ್ತಮ ಗುಣಮಟ್ಟದಿಂದ ಕೂಡಿವೆ. ವಿಸ್ತಾರ ಟಿವಿ ಚಾನೆಲ್ ಕೂಡ ವಿಭಿನ್ನವಾಗಿರಲಿದೆ ಎಂಬ ವಿಶ್ವಾಸವಿದೆ. ವಿಸ್ತಾರ ಮೀಡಿಯಾ ನಂ.1 ಆಗಿ ಬೆಳೆಯಲಿ ಎಂದು ಹರೀಶ್ ಅವರು ಆಶಿಸಿದರು.

ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ವಿಸ್ತಾರ ಮೀಡಿಯಾದ ಚೇರ್ಮನ್ ಮತ್ತು ಎಂಡಿ ಎಚ್. ವಿ. ಧರ್ಮೇಶ್, ನಿರ್ದೇಶಕರಾದ ಶ್ರೀನಿವಾಸ ಹೆಬ್ಬಾರ್, ಕಾರ್ಯನಿರ್ವಾಹಕ ಸಂಪಾದಕ ಶರತ್ ಎಂ. ಎಸ್. ಜತೆಗಿದ್ದರು.

ಇದನ್ನೂ ಓದಿ | ವಿಸ್ತಾರ ನ್ಯೂಸ್‌ ಕಚೇರಿಗೆ ಸಿಎಂ ಬೊಮ್ಮಾಯಿ ಭೇಟಿ, ಟಿವಿ ಚಾನೆಲ್‌ ಸಿದ್ಧತೆಗೆ ಮೆಚ್ಚುಗೆ

Exit mobile version