Site icon Vistara News

ಪತ್ನಿಯ ಬಾಳು ಹಾಳು ಮಾಡಿದೆ ಎಂದು ಮನನೊಂದ ವೈದ್ಯ ಆತ್ಮಹತ್ಯೆ

ವೈದ್ಯ ಆತ್ಮಹತ್ಯೆ

ಬೆಂಗಳೂರು : ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಅಪಾರ್ಟ್‌ಮೆಂಟ್ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈದ್ಯ ಪೃಥ್ವಿರಾಜ್ ರೆಡ್ಡಿ (31) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.

ಇದನ್ನೂ ಓದಿ | ಹೊಲದಲ್ಲಿ ವಿಷ ಕುಡಿದು ನಾಲ್ವರಿಂದ ಆತ್ಮಹತ್ಯೆ ಯತ್ನ, ಶಾಸಕ ಓಲೆಕಾರ್ ಕುಟುಂಬದ ದಬ್ಬಾಳಿಕೆ ಕಾರಣವೆ?

ಮೂರು ತಿಂಗಳ ಹಿಂದೆ ವೈದ್ಯೆಯನ್ನು ಪೃಥ್ವಿರಾಜ್ ರೆಡ್ಡಿ ಮದುವೆ ಆಗಿದ್ದರು. ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ಸಂಭವಿಸಿತ್ತು. ಅಮೃತಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಆತ್ಮಹತ್ಯೆ ಮಾಡಿಕೊಂಡಿರುವ ವೈದ್ಯ ಪೃಥ್ವಿರಾಜ್‌ ರೆಡ್ಡಿ ಮೂಲತಃ ಆಂಧ್ರದ ಕಡಪದವರು. ಹೃದಯ ಸಂಬಂಧಿ ಕಾಯಿಲೆಯಿಂದ ಪೃಥ್ವಿರಾಜ್‌ ರೆಡ್ಡಿ ಬಳಲುತ್ತಿದ್ದರು. ಮದುವೆ ಆದ ಕೆಲವೇ ದಿನಗಳ ಬಳಿಕ ಅವರಿಗೆ ಕಾಯಿಲೆ ಇರುವುದಾಗಿ ತಿಳಿದು ಬಂದಿತ್ತು. ಹೆಂಡತಿ ಬಳಿ ಕಾಯಿಲೆ ಇರುವ ವಿಷಯ ಹೇಳಿಕೊಳ್ಳಲಾಗದೇ ಬೇಸರದಲ್ಲಿದ್ದರು ಎನ್ನಲಾಗಿದೆ. ಪತ್ನಿಯ ಬಾಳು ಹಾಳು ಮಾಡಿದೆ ಎಂದು ಮನನೊಂದು ಅಪಾರ್ಟ್‌ಮೆಂಟ್‌ನ 11 ನೇ ಫ್ಲೋರ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಮಾತನಾಡಿ, ಮದುವೆ ಆದ ಬಳಿಕ ದಂಪತಿ ಅಪಾರ್ಟ್‌ಮೆಂಟ್‌ಗೆ ಶಿಫ್ಟ್‌ ಆಗಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ವೈದ್ಯ ಪೃಥ್ವಿರಾಜ್ ರೆಡ್ಡಿ ಬಳಲುತ್ತಿದ್ದರು. ಈ ವಿಚಾರವನ್ನು ಪತ್ನಿಗೆ ಹೇಳಲಾಗದೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈಗಾಗಲೇ ಈ ವಿಚಾರವನ್ನು ಪೃಥ್ವಿರಾಜ್ ರೆಡ್ಡಿ ಕುಟುಂಬದವರಿಗೆ ಮಾಹಿತಿ ನೀಡಿದ್ದೇವೆ. ಕುಟುಂಬದವರಿಂದ ಕಂಪ್ಲೆಂಟ್‌ ತೆಗೆದುಕೊಂಡ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ | ಕೋಲ್ಕತ್ತದಲ್ಲಿ ಗುಂಡಿನ ದಾಳಿ ನಡೆಸಿ, ಆತ್ಮಹತ್ಯೆ ಮಾಡಿಕೊಂಡ ಪೊಲೀಸ್‌ ಕಾನ್‌ಸ್ಟೆಬಲ್‌

Exit mobile version